ಶ್ರದ್ಧಾಂಜಲಿ-೧

ಏಕೆ ಈ ಸಾವು,ಏಕೆ ಈ ಸಾವು
ಅರೆ ಪಾವು ಆಸೆಯನು ಇರಿಸದೇ...
ಅನುಚಿತ ಔಚಿತ್ಯವಲ್ಲದ ನೋವು
ಕಾಡಿದೆ ಸಾವಾಗಿ, ಬೇಡವಾಗಿಸಿದೆ ಬದುಕನೇ...
ದೇವರೆದುರಿಗೆ ಬಂಡಾಯವೆದ್ದಿದೆ ಮನಸು
ತಾಳಲಾರದಾಗಿದೆ ನೋವು ಮನದೊಳಗೆ.
ಯಾರ ಸಮಾಧಾನ ಅಸಮಧಾನ ಕೇಳಿಸದಾಗಿದೆ
ಉಳಿದಿಹುದೇನು ಜೀವನದಲಿ ಅನುರಾಗವೇ ಕರಗಿದಮೇಲೆ
ಬದುಕು ಬರುಡಾಗಿ ಬಂಡಾಯವೆದ್ದಿದೆ
ಕಣ್ಣೆದುರಗಿನ ಸತ್ಯವನರಗಿಸಿಕೊಳ್ಳಲಾಗದೆ ಚಡಪಡಿಸಿದೆ
ಮನಸು ಕುದಿಯುತಿದೆ ಕಾರುಣ್ಯವಿಲ್ಲದಿರುವ ದೈವ ಚಿತ್ತಕೆ.
ಧಿಕ್ಕಾರವೆಂದಿದೆ ದೈವ ಸಂಕಲ್ಪಕೆ,
ಧಿಕ್ಕಾರವೆಂದಿದೆ ಹಣೆಬರಹಕೆ,
ಧಿಕ್ಕಾರವೆಂದಿದೆ ಬದುಕಿನ ನಿಯಮಕೆ,
ಧಿಕ್ಕಾರವಿರಲಿ ನಮ್ಮ ಮಗಳಿಲ್ಲದೀ ಬದುಕಿನ ದಾರಿಗೆ.
ಇದ್ದ ಆಸೆ ಆಕಾಂಕ್ಷೆಗಳು ಮಣ್ಣು ಪಲಾದವು,
ಪ್ರೀತಿ ಮಮಕಾರ ವಾತ್ಸಲ್ಯ ಅರ್ಥಕಳೆದುಕೊಂಡು,
ಅವಳೊಂದಿಗೆ ಮಣ್ಣೊಳಗೆ ಕರಗಿ ಹೋದವು.
ಬದುಕು ಭಾರವಾಗಿ ಬೇಸರ ಬೇಗುದಿಯಾಗಿದೆ,
ತೀರದ ನೋವು ಝರಿ ತೊರೆಯಂತಾಗಿದೆ,
ನಮ್ಮೀಬದುಕು ಮುಗಿವವರೆಗೂ ಹೆಪ್ಪುಗಟ್ಟಿದ ಹರಳಾಗಿ ಕಾಡುವುದೀಸಾವು

- ಸುರೇಂದ್ರ ಕುಮಾರ್. ಎಸ್ಎಲ್

16 Sep 2016, 07:32 pm
Download App from Playstore: