ನಮ್ಮ ಜಗತ್ತು

ನಗರೀಕರಣದ ನೆಪದಲ್ಲಿ ಅರಣ್ಯನಾಶ
ಪ್ರಾಣಿ ಪಕ್ಷಿಗಳು ಆಗುತ್ತಿವೆ ಸರ್ವನಾಶ
ಜಾಗತೀಕರಣದ ನೆಪದಲ್ಲಿ ಲೋಕನಾಶ
ಪ್ರಮುಖ ಕಾರಣವೇ ಮಾನವನ ಸಂತೋಷ
ಇನ್ನೇನು ಉಳಿದೀತು ಈ ಪರಪಂಚ
ಎಲ್ಲವೂ ಸೇರುತಿವೆ ಅಳಿವಿನ ಅಂಚ
ಏರಲಾರೆವು ಉಳಿಗಾಲದ ಮಂಚ
ಏರುತಿವೆ ಸುನಾಮಿ,ಬೀಸುತಿವೆ ಚಂಡಮಾರುತ
ಕಾಡುತಿದೆ ಬರಗಾಲ, ನಮಗಿಲ್ಲ ಇನ್ನು ಉಳಿಗಾಲ
ಸಾಕು ಸಾಕು ಹೇಳಲಿ ಏನಂತ, ಇವು ಸಾರುತಿವೆ ಮನುಕುಲದ ಅಂತ್ಯ.
- ಮನ್ವಂತರಿ

- sarpa

20 Oct 2016, 12:13 pm
Download App from Playstore: