ಉಸಿರಾಗಲಿ ಕನ್ನಡ;
ಹಸಿರಾಗಲಿ
ಉಸಿರಾಗಲಿ ಕನ್ನಡ;
ಹಸಿರಾಗಲಿ ಕನ್ನಡ!
ಚಿನ್ನದ ಊರು ನಮ್ಮೂರು ,
ಕಲ್ಪತರ ನಾಡು ಕರುನಾಡು !
ಮಲೆನಾಡ ನೆಲೆವೀಡು.
ಸಕ್ಕರೆಯ ಸಿಹಿಯೂರು,
ಚೆನ್ನಪಟ್ಟಣದ ಗೊಂಬೆಯೂರು;
ಒಡೆಯರ ಕಲೆಯೂರು.
ರೇಷ್ಮೆಯ ನವಿಲೂರು,
ಮಾವಿನ ತವರೂರು:
ಮಾಸ್ತಿಯ ಮಾಲೂರು.
ಕವಿ ಪುಂಗವರ ಹುಲಿನಾಡು,
ಕೆಂಪೇಗೌಡರ ಬೆಂದಕಾಳೂರು;
ವಚನಕಾರರ ನಲ್ಮಮೆಯ ನೆಲೆವೀಡು.
ಕನ್ನಡ ಕಣ್ಮಣಿಗಳ ಈ ಊರು!
ಕನ್ನಡಿಗರ ಸ್ವಾಭಿಮಾನದ ಸಂಕೇತ ನಮ್ಮೂರು.
- ವೇಣು ಆರ್ ಚಿನ್ನದೂರು
31 Oct 2016, 09:09 pm
Download App from Playstore: