ರೈತ

ಓಂಕಾರ ನಾದದಲಿ
ಜೆಂಕಾರ ನುಡಿಯಲಿ
ಚಿತ್ತಾರದ ಗೆರೆಯಲಿ
ಸುತ್ತೂರು ಹೆಸರಾಗಲಿ
ಓ ಎನ್ನ ದೇಶದ ಬಂಧು
ಬಳಗದ ಜೀವ ನೀನಾಗಲಿ

ಉತ್ತುವ ಬೆಳೆಯಲಿ
ಬಂಗಾರ ನಿನದಾಗಲಿ
ಸುತ್ತುವ ಈ ಜಗತ್ತಿನಲಿ
ನಿನ್ನ ಹೆಸರೇ ಉಳಿಯಲಿ
ಸತ್ತು ಬದುಕುವ ಜಗತ್ತಲ್ಲಿ
ಬದುಕಿಸುವ ನಿನ್ನ ಸೇವೆ ಮುಂದುವರಿಯಲಿ

ಈ ಕತ್ತಲ ಜಗತ್ತಿನಲಿ
ಅರೆ ಬೆತ್ತಲೆಯಾಗಿ
ಜೋಡಿ ಎತ್ತಿನ ಜತ್ತಿಯಲ್ಲಿ
ಮುತ್ತಿನ ರಾಶಿಯನ್ನು ಕಾಣುವ
ಉತ್ತುಂಗದ ಶಿಖರದಲಿ ನಿಂತು
ಹೊತ್ತು ಹೊತ್ತಿಗೆ ಊಟ ನೀಡುತಲಿರುವ
ಕಣ್ಣಿಗೆ ಕಾಣುವ ದೇವರೆ
ನಿನಗೆ ಎಂದೆಂದಿಗೂ ನಾವು ಚಿರಋಣಿ

ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}

- ನಾಗರಾಜ ಬಾಕೆ೯ರ್

08 Nov 2016, 10:38 pm
Download App from Playstore: