ಕವಿತೆಗೇಕೆ ಹೆಸರು
ಕವಿತೆಗೇಕೆ ಬೇಕು ಹೆಸರು,
ಕವಿಯ ಜೀವ ಮಿಡಿಯುತ್ತಿರಲು,
ಭಾವ-ಭಾಷೆ ಕಲೆತು ನಿಂತು,
ಹೊಮ್ಮುತ್ತಿರಲು ಕಾವ್ಯ ಸೃಷ್ಟಿ.
ಜನರು ಹೇಳ್ವ, ಹೆಸರ ಕೇಳಿ?
ಬೀಸುವುದೇನು ತಂಪು ಗಾಳಿ.
ಕವಿಗೇಕೆ? ಕಾವ್ಯನಾಮ,
ಕಾವ್ಯಸೃಷ್ಟಿ ಅವಂಗೆ ಮುಕ್ತಿಧಾಮ,
ನೋವು-ನಲಿವು,ಸೋಲು-ಗೆಲವು,
ಕಷ್ಟ-ನಷ್ಟ,ರೀತಿ-ನೀತಿಗಳ ಸಮುದ್ರದಲೆಯ ಸೀಳಿ,
ಆಳಮುಟ್ಟಿ ಹೆಕ್ಕಿ ತರಲು ರತ್ನವು,
ರತ್ನ ಅದುವೇ ಕಾವ್ಯವು.
ಜನರು ಹೇಳ್ವ ಹೆಸರ ಕೇಳಿ?
ಮಿಂಚುವನೇನು ದಿನವು ಭಾನು.
ಬದುಕು ಬಯಲುದಾರಿಯಲ್ಲಿ ಓಟ,
ದಿನವು ನಿತ್ಯ ಓಲುಮೆಯಾಟ,
ಬಯಲೊಳಡಗಿದೆ ದಾರಿಯು.
ದಾರಿಗೇಕೆ? ಬೇರೆ ಹೆಸರು,
*ಬಯಲುದಾರಿ*ಅಷ್ಟೇ ಅದರ ಹೆಸರು.
ಜೀವದೊಳಗೆ ಒಲುಮೆಯಿರಲು,
ಒಲುಮೆಯೊಳಗೆ ದೇವನಿರಲು,
ಅವನಿಗೇಕೆ ಒಂದು ಹೆಸರು,
ಒಲುಮೆ ಅದುವೆ ದೇವರು.
ಪ್ರವೀಣ್ ವಿಪ್ರ
- ವಿಪ್ರ
15 Nov 2016, 11:49 pm
Download App from Playstore: