ಅಖಂಡ ಕರ್ನಾಟಕ

ಕರುಣಿಸು ಕರುನಾಡ ಬನಶಂಕರಿ,
ಕರಗಳಲಿ ಕನ್ನಡದ ಬಾವುಟವ,
ಕಾರ್ಯಗಳಲಿ ಕನ್ನಡದ ಪ್ರೇಮವ,
ಕಾಲಿಡುವೆಡೆಯಲಿ ಕನ್ನಡದ ಧೀರತನವ,
ನುಡಿಗಳಲಿ ಶಾರದೆಯ ಗಾನಾಮೃತವ.


ಹುಟ್ಟುವೆನು ನಾನ್ .
ಎರೆಹುಳುವಾದರೆ ನಿನ್ನ ಕಲ್ಪವೃಕ್ಷದಡಿಯಲ್ಲಿ.
ಸಲಗವಾದರೆ ನಿನ್ನ ಅಂಬಾರಿ ಹೊರುವೆನು..
ಏನಾದರೆನು ನಾನ್ ಕನ್ನಡಕ್ಕೆ ದುಡಿವುದು ,
ಎನ್ನ ನಕಶಿಕಾಂತದೊಳಡಗಿದ ಅಣು-ಅಣುವು ಕನ್ನಡಕೆ ಮಡಿವುದು...


ಸಾವಿರ ಸುದರ್ಶನರ ಚಕ್ರಕ್ಕಿಂತಧಿಕ
ವೇಗದಲಿ ನುಗ್ಗಿ..
ತಾಯ್ಗಂಡರ ತಲೆಗಳ ತರಿದು ಬಿಡುವೆನಮ್ಮ....
ಅಖಂಡ ಕರ್ನಾಟಕವನು ಉಳಿಸುವೆನು,
ನಿನ್ನ ಸಹ್ಯಾದ್ರಿ ಸೆರಗಿನ ಮೇಲಾಣೆ.


ಮರೆಯನು ನಾನ್
*ಅಖಂಡ ಕರ್ನಾಟಕ,ಭವ್ಯ ಭಾರತ*ವೆಂಬ ಘೋಷವಾಕ್ಯವ.
ವೀರಾಟ್ಟಹಾಸದಲಿ ಬಾನು-ಭುವಿ ಬೆಳಗಲಿದೆ *ಅಖಂಡ ಕರ್ನಾಟಕವು ಭವ್ಯಭಾರತದಲ್ಲಿ*.
ಇದನ್ನೇ ಮಾಡ್ವೆ.ಇಲ್ಲದ್ದಿದ್ದರೆ ಸಾಯ್ವೆ.



ಪ್ರವೀಣ್ ವಿಪ್ರ

- ವಿಪ್ರ

16 Nov 2016, 08:08 am
Download App from Playstore: