ಸಮಾಧಿ

ಮರದ ತೊಗಟೆಯ ನಾರು,
ತೊಗಲು ಬಟ್ಟೆಯ ಉಡುವವರಾರು?
ಉಳಿದದ್ದು
ಪಂಜರ ಸೇರಿದ ಮನುಜರು ಮತ್ತು
ಕೋಟು ಟೋಪಿಯವರ ಹಡಗು…

ಮುಗ್ಧ ಕಪ್ಪುಜನರು ಮಾರುಕಟ್ಟೆಯಲಿ
ಸರಕಿನಂತೆ ಹರಾಜಾದರು…
ಬಿಳಿಯನ ಮನೆಯ ಹಜಾರದಲ್ಲಿ
ನಾಯಿಗಳಂತೆ ಬದುಕಿದರು…

ಶಾಂತಿದೂತನ ಕ್ರುಸೇಡಿಗೆ
ಗುಂಡುಗಳು ಹಾರಿದ್ದವು,
ನಾಗರಿಕತೆಯ ನೆಪಕ್ಕೆ
ಮಾನವೀಯತೆ ಮೂಲೆ ಸೇರಿತ್ತು…

ಕಪ್ಪು ಹೆಣಗಳ ನಡುವೆ
ಬಿಳಿಯ ಪಾದ್ರಿ
ಬೈಬಲ್ ಹಿಡಿದು ಓಡಾಡುತ್ತಿದ್ದ……
ಕಾಡದೇವರ ಕಲ್ಲಿಗೊಂದು ಚರ್ಚು ಕಟ್ಟಿ
ಕರಿಯ ಸಂಸ್ಕೃತಿಗೆ
ಮಿಷನರಿಗಳು ಮಣ್ಣುಮುಚ್ಚುತ್ತಿದ್ದವು………

- ಪರಮೇಶ್ವರ

- ಒಂಟಿತೋಳ

23 Nov 2016, 10:24 am
Download App from Playstore: