ಕ್ರೌರ್ಯ
ಕಾಶ್ಮೀರ ಆಕ್ರಮಿಸಿದರೂ
ಬಳೆತೊಟ್ಟು ಕೂತಿದ್ದೀರಿ
ಉಗ್ರರ ಉಪಟಳಕ್ಕೆ
ಸೀರೆಯುಟ್ಟು ಒಳಗಿದ್ದೀರಿ
ನಕ್ಸಲರ ಅಟ್ಟಹಾಸಕ್ಕೆ
ತಲೆಬಾಗಿ ನಿಂತಿದ್ದೀರಿ
ಮಹದಾಯಿ ನೀರು ಕೇಳಿದ್ದಕ್ಕೆ
ಮಹಿಳೆ,ಮಕ್ಕಳು,ಮುದುಕರೆನ್ನದೆ
ಮನೆನುಗ್ಗಿ ಹೊಡೆದಿದ್ದೀರಿ
ಅಲ್ಪವಾದರೂ ಬೇಕಲ್ಲವೆ ಮಾನ,ಮರ್ಯಾದೆ,ನಾಚಿಕೆ?
ಸಂಸತ್ತಿಗೆ ನುಗ್ಗಿದರೂ
ಪರವಾಗಿಲ್ಲ ಕ್ಷಮಾದಾನ
ಗುಂಡಿಟ್ಟು ಕೊಂದರೂ
ಪರವಾಗಿಲ್ಲ ಕ್ಷಮಾದಾನ
ಕೋಟಿ ಕಬಳಿಸಿದರೂ
ಪರವಾಗಿಲ್ಲ ಕ್ಷಮಾದಾನ
ಮಹದಾಯಿ ನೀರು ಕೇಳಿದ್ದಕ್ಕೆ
ದರ್ಪ,ದೌರ್ಜನ್ಯ ಎಸಗುವ
ಆ ರಕ್ಷಕರಿಗೆ ಇಲ್ಲ ಸಮಾದಾನ
ಅಲ್ಪವಾದರೂ ಬೇಕಲ್ಲವೆ ಮಾನ,ಮರ್ಯಾದೆ,ನಾಚಿಕೆ?
ಕಣ್ಮುಚ್ಚಿ ಕುಳಿತ ನಾಯಕರೆ
ಜಾಣತನದ ಅಧಿಕಾರಿಗಳೆ
ಲಾಠಿ ಎತ್ತುವ ಆರಕ್ಷಕರೆ
ಮಣ್ಣಮಕ್ಕಳ ಮೇಲೆ ಕೈಮಾಡುವ
ಮುನ್ನ ಸ್ವಲ್ಪ ಯೋಚಿಸಿ....
ಮುರಿದರೆ ರೈತರ ಬೆನ್ನು
ತಿನಬೇಕಾದೀತು ಮಣ್ಣು!
-ಬಸುತನಯ, ಧಾರವಾಡ
- ಬಸುತನಯ
09 Dec 2016, 03:19 pm
Download App from Playstore: