ಹಿಂದಿನ ಭಾರತಕ್ಕೆ ಇಂದಿನ ಭಾರ
ನೆನಪಾಗುತ್ತಿದೆ ಹಿಂದಿನ ಭಾರತ ಬದುಕು
ನಸು ಬೆಳಕಾಗಿದೆ ಇಂದಿನ ಜೀವನ ತುಣುಕು
ರಾಜ-ಸೇವಕ, ಗುರು-ಶಿಷ್ಯರ ಸ್ವಾಮಿ ಭಕ್ತಿ
ಆಜ್ಞಾ ಕಾರ್ಯದಿ ಚಿತ್ತ ಭಕ್ತಿಯ ಮುಕ್ತಿ
ಇದುವೆ ಆನಾದಿ ಕಾಲದ ಶೋಭಿತ ಸೂಕ್ತಿ
ಆದರೆ ಏನಾಗಿದೆ ಇವತ್ತು?
ನೋಡು ನೋಡುತಾ ಬರುವ ಕಾಲಗಳು
ಆಯಾತಪ್ಪಿ ಮುಕ್ಕುರುಸಿ ಬೀಳುತ್ತಿವೆ
ಕಾರಣ, ಮೋಸದ ಆಡಳಿತಸೂತ್ರ ಬಳಕೆಯ ಕಾರ್ಖಾನೆ
ಉಗುಳುತಿದೆ ತನ್ನೋಳಗಿನ ವಿಷದ್ವೇಷ
ಬಲಿಯಾದವರು ಅಮಾಯಕರು! ಬಳಿಯೇ ಯಮಪಾಶ
ಕೇಳೋರು ದಿಕ್ಕಿಲ್ಲ, ಬಂದರೋ ಅವರಿಗೆ ಬದುಕಿಲ್ಲ
ಅಧಿಪತಿಯೇ ಭ್ರಷ್ಟನಾದರೆ ಅಧಿಕಾರಿಗಳು ಅದೃಷ್ಟರು!
ಅಧರ್ಮ ಕಾಲ ಬರಬಹುದೇನೋ...?
ಮಾಯಾ ಜಾಲ ಬೀಸಿ ಉಕ್ಕಿಸುವುದು ಹಾಲಹಲ
ಬರಬಹುದು ವಿಷ್ಣುವಿನ ಹನ್ನೆರಡನೇ ಅವತಾರ
ಮೊದಮೊದಲು ಹೆದರಬಹುದು ನೋಡಿ ಇವರ ಗ್ರಹಚಾರ
ಜಾತಿ ಎಂಬ ಬಲೆ, ಮತವೆಂಬ ಸೆಲೆ, ಕೋಮುವಾದದ ಅಲೆ
ಕಂಡು! ಕಂಗಾಲಾದರೂ ಸಂಶಯವಿಲ್ಲ
ಗೋಮುಖ ಧರಿಸಿದ ವ್ಯಾಘ್ರಗಳೋ ಸುತ್ತಲಿನ ಜನರು
ಸಾಥ್ ನೀಡುವ ನಾಟಕವಾಡಿ ದೂರ ಓಡಿ ಸಂತಸ ಪಡುವವರು!
ಅಶಾಂತಿ, ಕೊಲೆ, ದರೋಡೆ ಎಂಬ ಭೂತ ಮೈಗೂಡಿಸುವವರು!
ಬಲಿಯಾದವರು ಪರಿಶುದ್ಧ ಧರ್ಮಾಂಧರು!
-ದೇವ ಕಜ್ಜೇರ
- Deva Kajjera
10 Dec 2016, 12:12 pm
Download App from Playstore: