ದುರಂತ
ಓ..ಸೂರ್ಯ,
ನೀ ಬಂದು ನಮ್ಮ ಮನೆಯ ಒಲೆಯೊಳಗೆ ಕುಳಿತುಬಿಡು,
ನನ್ನ ಅವ್ವ ರೊಟ್ಟಿ ಬೇಯಿಸಿ ಬಿಡುವಳು ನಿನ್ನ ನೆತ್ತಿಯ ಮೇಲಿಟ್ಟು.
ಓ..ಸೂರ್ಯ,
ನೀ ಬಂದು ಸ್ಮಶಾನದಲಿ ಚಿತೆಯಾಗು
ನಮ್ಮವರು ಹೆಣ ಸುಟ್ಟು ಬಿಡು
ಅವರ ಮೈಯೊಳಗಿನ ರಕ್ತಗಾಯ ಅಳಿಸಿಬಿಡು.
ಓ... ನನ್ನ ಜನಗಳೆ,
ಸತ್ತು ಸಮಾಧಿ ಸೇರಿದ ನಮ್ಮವರ ಹೆಣಗಳನು
ಕಿತ್ತು ಹೊರಗೆ ಎಸೆಯಿರಿ
ಹದ್ದು ಕಾಗೆಗಳು ಹಸಿದು ಕುಳಿತಿವೆ
ತಿಂದು ತೇಗಲಿ...
ಓ... ಚಂದ್ರ,
ನೀ ಬಂದು ನಮ್ಮ ಹರಕು ಮುರುಕು ಹಂಚಿನ ಗುಡಿಸಲು ಮೇಲೆ ಕುಳಿತುಬಿಡು
ನೀ... ತಂಪಿಗೆ ಹೆಸರಂತೆ...
ಕಣ್ಣು ಮುಚ್ಚಿ ಕಣಸು ಕಾಣುವೆ ನಾ,
ನನಗೆ ಉಳಿದಿರುವುದೊಂದೆ ನಾ ಬಡವ.....
ರಚನೆ: ರೇವಣಸಿದ್ದ ಗೌಡರ.
ಸಾ: ರಬಕವಿ-587314
Mobile:9008060918
- Revanasidda Goudar
10 Dec 2016, 02:32 pm
Download App from Playstore: