ಹೆತ್ತವಳು

ಅಮ್ಮ,
ಬಂದಿರುವುದು ಕಳೆಯಲು ಒಂದಿಷ್ಟು ದಿನ
ಬಂಧನಗಳ ನಡುವೆ ಏಕೆ ಕಟ್ಟಿ ಹೋಗಿದೆ ಈ ಮನ

ನನ್ನದಿಲ್ಲಿ ಎನ್ನಿಲ್ಲ ಎಂಬ ಅರಿವಿದೆ
ಆದರು ಮಹಾದಾಸೆಗಳ ಹೊತ್ತು ಈ ಜೀವ ಸಾಗಿದೆ

ಪುಟ್ಟ ಪುಟ್ಟ ಕನಸು ಬೆಳೆದು ದೊಡ್ಡದಾಗುವುದೇಕೆ?
ಚಿಗುರುವ ಮುನ್ನವೆ ಬಾಡಿ ಹೋಗುವುದೇಕೆ..

ಅರ್ಥವಾಗದ ಈ ಜೀವನಕ್ಕೆ ಉತ್ತರವೆಲ್ಲಿ ಹುಡುಕಲಿ..
ಕೈ ಹಿಡಿದು ನೆಡೆಸೆನನ್ನು ಬಾ ಬೇಗ ನಿನ್ನಿಂದು.

ರವೀಂದ್ರ ಬಿ.ಆರ್.

- ರವೀಂದ್ರ

13 Dec 2016, 11:41 am
Download App from Playstore: