ಶುಭೋದಯಕೆ ಸ್ವಾಗತ
ಚಿಂತಿ ಮಾಡಕೊಂತ ಯಾಕ ಕುಂತಿ..
ಜೀವನ ನೀ ನಡೆಸದೆ ಇದ್ದರೂ ನೀ ನಡೆಸಿದರೂ ತನ್ನ ಪಾಡಿಗೆ ಹಗಲಿರುಳ ತಳ್ಳಿ ನಡಿಯೋದ...
ಕಾಲಿಗಂಟಿಕೊಂಡ ಕಾಲ ಚಕ್ರ ನನ್ನ ನಿನ್ನ ಯಾವತ್ತು ಕಾಯೂದಿಲ್ಲ ...
ಮುಳ್ಳು ಬೇಲಿಗೆ ಮೈಲಿಗೆ ಅಂಟಿಕೊಂಡಿಲ್ಲ ...
ಬಿಸಿಲಿಗೆ ಬೆಂದ ಅರಳಿದ ಗುಲಾಬಿ ನಗುತ್ತಿದೆಯಲ್ಲ..
ಮುಳ್ಳು ಸಂಕಟಗಳಿಗೆ ಎದುರಾಗಿ ಬದುಕ ಸಾಗುತಲಿದೆ
ತಾಳಕೆ ತಕ್ಕಂತೆ ಹೆಜ್ಜೆ ಹಾಕಿ ಸುಂದರ ಬದುಕಿಗೆ ಸಾಕ್ಷಿಯಾದರೆ ಸಾಕು ಅದೇ ಸ್ವರ್ಗ
ನರಕಕ್ಕೆ ಕಿಚ್ಚು ಹತ್ತಿಸಿ ಬರುವ ಕಷ್ಟಗಳಿಗೆ ಬರೆ ಎಳೆದು ಕಳಿಸಿಬಿಡೋಣ....
-- ಬೀರು ದೇವರಮನಿ
- Beeru Devaramani
13 Dec 2016, 12:50 pm
Download App from Playstore: