ಕವಿ- ಕತೆ

ಬೇಡ ಎನ್ನಬೇಡ
ನನ್ನ ಕವಿತೆ
ಬಾಡಿ ಹೋದೀತು
ಸಾಹಿತ್ಯ ಕತೆ

ಬೇಡವಾಯಿತೆ
ಭಾವನೆಗಳ ಮಾತು ಮಂಥನ
ಕೊನೆಯಾದೀತು
ನೋವು ನಲಿವುಗಳ ಕಥನ

ಬೇಸರವಾಯಿತೆ
ಮನದ ತುಮುಲಗಳ ಆಕ್ರಂದನ
ಮುದುಡಿ ಹೋದೀತು
ಮೃದು ಹೃದಯಕಮಲದ ಚೇತನ

ಹೊರೆಯಾಯಿತೆ
ಕಾವ್ಯ ಕನ್ನಿಕೆಯ ತಾಕಲಾಟ
ಮುದವ ನೀಡೀತು
ಅವಳೊಂದಿಗಿನ ಲಲಾಟ

ಕಹಿಯಾಯಿತೆ
ಸಿಹಿ ಸಾಲುಗಳ ಕಣ್ಣೋಟ
ಮಧುರವಾದೀತು
ಸಾಹಿತ್ಯದ ಜೇನೂಟ

ಬರೆಯದಿರಲಾರೆ
ನಾ ನಿನ್ನ, ಕವಿತೆ
ಬೇಸರವಾದರೂ
ನೀ ನನ್ನ ಹಣತೆ

✍ಚಂದ್ರಶೇಖರ ಹೆಗಡೆ
CRP ಗುಳೇದಗುಡ್ಡ ಪಶ್ಚಿಮ

- ಚಂದ್ರಶೇಖರ ಹೆಗಡೆ

13 Dec 2016, 03:50 pm
Download App from Playstore: