ಕನ್ನಡ ಕ ಲಿ
ಏನ ಬರೆಯಲಿ ಎಲ್ಲ ಬರೆದಾಗಿದೆ,
ಮುಂದಿನ ಕೋಟಿ ಯುಗಕ್ಕಾಗುವಷ್ಟು,
ಬರೆದದ್ದು ಓದದೇ.................... ಹೋಗಿಬಿಟ್ಟರೆ,
ಜೀವಂತ ಹಡೆದರೂ ಹೋದ ಮಗುವಿನಂತೆ,
ಅರ್ಥಗಳೆಲ್ಲಾ ಅನರ್ಥ, ಅನರ್ಥಗಳೇ ಸಹಿಷ್ಣುವಾಗಿ,
ಬರೆದವನಿಗೂ ಪಾಠಕನಿಗೂ ಹಿಂಸೆ,
ಹಾಗೆಂದು ಸುಮ್ಮನಿರಲು ಭಾಷೆ ಬಿಡದಲ್ಲಾ,
ವಿಚಾರಗಳ ಸಂತೆಯಲಿ,
ಬಡಬಡಿಕೆಯ ವ್ಯಾಪಾರ,
ಮೌನವಂತೂ ಬಹು ತುಟ್ಟಿ,
ಅದಕ್ಕೇ ಬರೆದೇ'ಬಿಡು'ವೆ, ನೀ ಓದಿ 'ಬಿಡು,'
ಇಬ್ಬರೂ ಬಿಟ್ಟು ನೋಡೋಣ
ಭಾಷೆ ಹೇಗೆ ಓಡುತ್ತದೆಂದು,
ಕೊನೆಗೆ ನೀನೂ ಬರೆದು ’ಬಿಡು’
ನಾನೂ ಓದಿ ’ಬಿಡುವೆ’.
ಬಿಟ್ಟು ಹಿಡಿದು ಬಿಟ್ಟು ಹಾರಿಸುವ
ಕನ್ನಡದ ಬಾವುಟ,
ಜೈ ಭಾರತ ಜನನಿಯ ತನುಜಾತೆ,
ಜೈ ಹೇ ಕರ್ನಾಟಕ ಮಾತೆ.
- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ
16 Dec 2016, 11:27 pm
Download App from Playstore: