ಮನ್ವಂತರ(ಮಿಥ್ಯ)
ಭಾವ ತರಂಗಗಳ ಹೊಯ್ದಾಟದೊಳು
ನಿರ್ಜೀವ ಮೀನು ನಾನು
ಮನೋ-ಹೃದಯಗಳೆರಡರೊಳು
ಕುಣಿವ ಅಲೆಗೆ ಮಣಿವ ಶವ ನಾನು
ಮನ್ವಂತರವೆಂಬುದೆನ್ನಂಗೈಯ ರೇಖೆ
ಬರಿ ಬೂಟಾಟಿಕೆಯ ತತ್ವಗಳಿನ್ನೇಕೆ?
ನಡೆಯಿಂದ ನಡೆಯದ, ತನು-ಮನಕೆ
ನುಡಿಸಿದ್ದಾಂತದ ಹೊರೆಯ,ಬಾರವೇಕೆ?
ಅನುದಿನದ ಬಯಕೆಗಳನುಮಣಿಸಿ
ಭಾವದರಮನೆಯ ಕನಕ ಕದವ ತೊರೆದು
ಬದುಕಿನಡೆಗೆತೊಡರಿಪ ಗೋಜಲಬಿಡಿಸಿ
ಆಸೆಯ ಬಲೆಯೋಳಗಿಂದ ಬಯಲಿಗಾರುವ
ಬೇವು-ಬೆಲ್ಲದಂತಿಹ ಬದುಕಿನಲಿ
ಬೇವನೇ ಪಡೆದಿಹ ಕೈ-ಬಾಯ್ಗಳಿಗೆ
ಬೆಲ್ಲದಾನವನೀಯ್ವ,,ಬೇವದಾನವಪಡೆವ
ಬೇವು-ಬೆಲ್ಲವ ಬೆರಸಿ ಸಮರಸವ ಸವಿವ....
- ಜಿ. ಶಿವಪ್ಪ ನಾಯಕ
18 Dec 2016, 10:50 am
Download App from Playstore: