ನಾಗರೀಕತೆ
ಉದಯಿಸಿದೆ ಅಂದು ಭೂತಾಯಗರ್ಭದಿ
ನಲಿದಾಡಿದೆ ನಾನು ಸಿಂಧೀಯಳ ಮಡಿಲಲ್ಲಿ
ಬೆಳಗಿಸಿದರು ನನ್ನ ಅಕಳಂಕಿತ ಹೃದಯಗಳದಿ
ಬದುಕುಳಿದೆನು ನಾನು ಸಂಸ್ಕೃತಿಯ ಮನದಲ್ಲಿ..
ಕಂಡೇನು ಅಂದು
ಜಗ-ಗಮಿಸುವ ನಾಗರೀಕತೆಯಾಗಿ
ದೂಡಿದರು ಇಂದು
ವೈಶ್ಯಾಟದ ನಾಗರೀಕತೆಯಾಗಿ ..
ಉಳಿದಿರುವೆನು ನಾನು ಹರಿ
ಯುತ್ತಿರುವ ಪೀಳಿಗೆಯ ರಕ್ತದಿ ,
ಮುಂದಾಗ ಬಹುದೇನೋ
ಬರಿ ಪುಟಗಳ ಪದವಾಗಿ !!
ತಾಯಾಗಿ ಮೆರೆದು ನಾ
ಮಗುವಾಗಿ ಬೆಳೆಸಿದೆ.
ನಾನಾದಿ ಮೇಳ..ನಗರೀಕರಣದ ಮೂಲ
ನೀ ಬೆಳೆದೆ ಬೆಳೆಯ, ನಾ ತಂದೆ ಮಳೆಯ
ಕಟ್ಟೇವು ಸಮಾಜ, ಮನುಜ ಧರ್ಮದ ಮಿತಿಯ
ಮುಖಮಾಡಿದ ಭಾವನೆಗೆ ನಾನಾದೆ ಲಿಪಿಯಾಗಿ.
ಒಟ್ಟಾಗಿ ಬೆರೆತು ಕನಿಕಹಳೆ ಮೊಳಗಿರಲು,
ಕಣ-ಕಣದ ಕರೆ ನೀಡಿ
ಏಕೆ ನೀ ಮುನಿಸಿಕೊಂಡೆ
ಮನದಾಳದ ಮುಖದಿಂದ ..??
( ಈ ಕವಿತೆಯಲ್ಲಿ ನಾಗರೀಕತೆಯ ಭಾವ ಹಾಗೂ ವೈಜ್ಞಾನಿಕ ಬೆಳವಣಿಗೆಗಿನ ಕೊಡುಗೆಗಳನ್ನು ಬಣ್ಣಿಸುವ ಪ್ರಯತ್ನ ಮಾಡಲಾಗಿದೆ)
- ಆರ್.ಎಸ್.ಕೆ
20 Dec 2016, 11:10 am
Download App from Playstore: