ಪ್ರಚಂಡ ಕಿರಣಗಳು
" ನಾವೆಲ್ಲರೂ ಭಾರತೀಯರು" ಘೋಷಣೆ ಆಗುವ ಮುನ್ನ
ನಮ್ಮೆಲ್ಲರ ಕಥೆಯ ಕೇಳಿರು ಚಿನ್ನ.
ಶತ ಶತಮಾನದಿಂದ ಗುಲಾಮಗಿರಿ, ನಿಂದನೆ
ಅಸ್ಪೃಶ್ಯ , ಗೌರವ ನೀಡುತಿದ್ದವರ ಬಗ್ಗೆ
ಏನು ಹೇಳಿಲಿ?
ಹೊಡೆತ-ಬಡೆತ, ಭೇದ-ಭಾವ ಕಲಿತವರಿಗೆ
ಹೇಗೆ ತಲೆ ಬಾಗಿಲಿ?
ನಮ್ಮನ್ನ ಕಾಪಾಡಲು ನಮ್ಮ ದೇವರು ಬರಲಿಲ್ಲ
ಸಂಭವಾಮಿ ಯುಗೆ ಯುಗೆ ಸಂಭವಿಸಿಲಿಲ್ಲ
ಬುದ್ಧ ತತ್ವಗಳನ್ನು ಸಾಗರದಾಚೆಯ ತಳ್ಳಿದವರು
ಗೊಡ್ಡು ಸಂಪ್ರದಾಯ ಬಾಚಿ ತಬ್ಬಿಕೂಂಡವರು
ನಮ್ಮ ಕೆಟ್ಟ ಕಾಲ ಮುಗಿಯಿತು ಅಣ್ಣಾ
ಸೂರ್ಯ ಮುಳಗದ ನಾಡು ಬಂದಿತು ಅಣ್ಣಾ
ಸೇವ ಪವಿತ್ರ ಒಲುಮೆ ತಂದಿತು ಅಣ್ಣಾ
ಶಾಂತಿ ತತ್ವ ಚಿಲುಮೆ ಬೆಳೆಸಿತು ಅಣ್ಣಾ
ನಾವು ದೀರ್ಘ ಉಸಿರಾಡಲು ಅವರೇ ಕಾರಣ ಅಣ್ಣಾ
ಜಾತಿ -ಮತ, ಅ ಧರ್ಮ - ಈ ಧರ್ಮ ಸೃಷ್ಟಿ ಮಾಡ ಬೇಡ ಅಣ್ಣಾ
ವಿಶ್ವ ಮಾನವರಾಗಿ ಬದುಕುವ ಕಲಿಸು ಅಣ್ಣಾ
- Shinan
23 Dec 2016, 06:24 pm
Download App from Playstore: