ಕವಿ ರೈತ
ಕವಿ ರೈತ
~~~~~~~~~
ಚಿತ್ತ-ಬುದ್ಧಿಗಳೆಂಬ,
ಎತ್ತುಗಳ ಕುತ್ತಿಗೆಗೆ,
ಹೃದಯ ನೇಗಿಲ ಕಟ್ಟಿ,
ಅರಿವಿನೊಲ ಉತ್ತಿ!
ನುಡಿ ಬೀಜಗಳ ಬಿತ್ತಿ,
ಭಾವ ಜಲ ಸಿಂಪಡಿಸಿ,
ಕವನ ತೆನೆಗಳ ಬೆಳೆವ,
ಕವಿ ರೈತನೇ!
ಸುಗ್ಗಿಯಾ ಕಾಲವಿದು
ಹಿಗ್ಗುತಲಿ ಬಾರೋ,
ಕಬ್ಬಿಗರ ಬಳಗಕ್ಕೆ
ಹಬ್ಬ ತಾರೋ!
✍ಮಲ್ಲಿಭಾಗವತ ಗುಡಿಬಂಡೆ
- ಮಲ್ಲಿಭಾಗವತ್ ಗುಡಿಬಂಡೆ
24 Dec 2016, 10:16 am
Download App from Playstore: