ನೀನು
ಬದುಕಿರುವಸ್ಟು ದಿನ
ತಾನು ತಮ್ಮದು ಎಂಬ ಜನ!!
ಸತ್ತ ಮೇಲೆ ಆಗುವರು
ಯಾರಿಗೂ ಬೇಡದ ಹೆಣ!!
ಬದುಕಿರುವಾಗ ಆದೆ
ಸಾವಿರಾರು ಕೋಟಿಗೆ ಅಧಿಪತಿ!!
ಸತ್ತ ಮೇಲೆ ಕೊಂಡು ಹೋಗಲು
ನಿನ್ನಲ್ಲಿ ಉಳಿಯುವುದಾದರೂ ಏನು!!
ಕೋಟಿ ಗಳಿಸಿ ಕೋಟೆ ಕಟ್ಟಿದರೂ
ಅದು ನಿನ್ನ ಪಾಲಿಗಲ್ಲ!!
ನಿನ್ನ ಪಾಲಿಗೆ ದೊರೆಯುವುದು ಒಂದೇ
ಭೂತಾಯಿ ಮಡಿಲಲ್ಲಿ ಆರಡಿ ಮೂರಡಿ!!
ಕಾಮ ಕ್ರೋಧ ಲೋಭ ಮೋಹ
ಮದ ಮಾತ್ಸರ್ಯದಲ್ಲ ನೀನು!!
ಮೈ ಮರೆತು ಮಾಡಿದ್ದು ಏನು
ಯಾವುದೂ ಉಳಿದಿಲ್ಲ ಇನ್ನು!!
ಕಣ್ಣೀರ ಹರಿಸಿ ಹೋಗುವರೂ ಎಲ್ಲ
ನಿನ್ನೊಂದಿಗೆ ಬರಲು ಯಾರು ಇಲ್ಲ!!
ಜಡವಾಗಿ ಬಿದ್ದಿರುವೆ ನೀನು
ಸಿರಿ ಸಂಪತ್ತು ನಿನಗಿದ್ದರೇನು!!
ಬರುವಾಗ ಏನೂ ಇಲ್ಲ
ಹೋಗುವಾಗಲೂ ಏನೂ ಇಲ್ಲ!!
ಬದುಕಿರುವಸ್ಟು ದಿನ ತಾನು ತನ್ನದು
ಎಂಬ ಸ್ವಾರ್ಥದಿಂದೇನು ಫಲ!!
ಹುಟ್ಟಿದ ಮೇಲೆ ಸಾವು ನಿಶ್ಚಿತ
ಎಂದು ತಿಳಿದಿದ್ದರೂ ನೀನು!!
ಸ್ವಾರ್ಥಿಯಾಗಿ ಮಾಡಿದ್ದಾದರೂ ಏನು
ಯಾವುದೂ ಉಳಿದಿಲ್ಲ ಇನ್ನು!!
ನಿರ್ಜೀವ ಆಗಿರುವ ಈ ನಿನ್ನ ತನುವೀಗ
ಯಾರಿಗೂ ಬೇಡದ ಒಂದು ಜಡದೇಹ!!
ಸಾಗಲೇಬೇಕು ಮಸಣದ ಕಡೆಗೆ
ಆಗಲೇಬೇಕು ಪಂಚಭೂತದಿ ವಿಲೀನ!!
- ಪಿ.ಜಿ.ಜ್ಯೋತಿ
24 Dec 2016, 12:46 pm
Download App from Playstore: