ಶಿಲಾಶಾಸನ
ಹೂವಂತ ಅಣ್ಣರಲ್ಲಿ
ಜೇನಂತ ತಾಯಂದಿರಲ್ಲಿ
ರಸಹೀರುವ ದುಂಬಿಗಳಲ್ಲಿ
ಹೊನ್ನದ ರಸದುಂಬಿ ಕಂಡೆನವ್ವ.
ಯುಗಳ ಪರ್ಯಂತ ನಾ ಕಂಡ ಜೀವಂತ
ಕಾಯಕದ ನೀತಿ ಪಾಠವಗೈದ ಶರಣನನ್ನು
ನಮ್ಮ ನಿಮ್ಮಲ್ಲಿ ಮನದಾಳದ ಮಾತುಗಳಲ್ಲಿ
ಸರಿದೋಗಿ ಹೋದಂತ ಅಣ್ಣನ ಕಂಡೆನವ್ವ
ಲೋಕ ಡೂಂಕ ತಿದ್ದಲು ತಿಣಕುವ ತಮ್ಮಗಳಿರಾ
ಇಹಪರವ ಜಯಿಸಿ ಮೆರವ ಆದೇವ
ಶಿಲ್ಪಗಳಲ್ಲಿ ಮಾನವತೆಯ ಮೆರವ ಆ
ಗುರುವಿನ ನೆನಪಿನಲ್ಲಿ ನಾ ಇಂದು ಬದುಕಿದೇನವ್ವ
ಜಾತಿ ಭೇದ ನೀತಿ ಪಾಠಗಳ
ಮೇಲು ಕೀಳುಗಳ ಆತ್ಮ ಅಂತರಂಗದಲ್ಲಿ ಜಯಿಸಿದ
ಅವ್ವ ಅಪ್ಪಗಳಲ್ಲಿ ಅಚ್ಚಳಿಯದೇ ಜನಮಾಸದಲ್ಲಿ ಬದುಕಿದ ಜಗದ ಜ್ಯೋತಿಯ ಕಂಡೆನವ್ವ
ಕರಿನಾಡ ಉದರದಲ್ಲಿ ಸಿರಿನಿಂತ ಕಲ್ಯಾಣದಲ್ಲಿ ನಭೋ ಮಂಡಲದ ಚುಕ್ಕಿತಾರೆಗಳ ನಡುವಲ್ಲಿ ಸಾಮನ್ಯನಾಗಿ ಬದುಕಿದ ತಂದೆಯ ಕಂಡೆನವ್ವ
ಹೆಣ್ಣಿನ ಹುಚ್ಚಿನ ರಾಮಾಯಣ
ಜೂಜಿನ ಮೋಜಿನ ಮಹಾಭಾರತ
ಜಾತಿಭೇದದ ಕೂಮುವಾದಿಗಳ ಕಲ್ಯಾಣದಲ್ಲಿ ಸ್ಯೂರನಾಗಿ ಮೂಡಿಬಂದ ಅಜಾತಶತ್ರು
ಇನ್ನೆಂಟು ಕಳೆದರು ಕಳೆಗುಂದದ ಶಿಲಾಶಾಸನ ಜಯಶರಣ ನಿನ್ನನಾಮವ ಭಜಿಸಿದೊಡನೆ ಭವಹರಣ
'ಶ್ರೀಗುರು ಬಸವಣ್ಣ
ಇಂತಿ ನಿಮ್ಮ ಕವಿ ಕುವರ
ಶರಣ - ಗೌಡ್ರುಸರ್ಕಾರ್
- ಗೌಡ್ರುಸರ್ಕಾರ್
05 Jan 2017, 07:44 pm
Download App from Playstore: