ಹಣತೆ -ಕಲಾವಿದ -ಲೇಖಕ

ಕತ್ತಲೆಯಿಂದ ಹಣತೆ ಔಚಿತ್ಯ ತಿಳಿವುದು
ಬೆಳಕಿನಿಂದಲೇ ಲೋಕದ ತಿಮಿರ ಅಳಿವುದು

ಲೇಖಕನಿಗೆ ಲೇಖನಿಯೇ ಹಣತೆ
ಕಲಾವಿದನಿಗೆ ಕುಂಚವೇ ಪಣತಿ
ಅಜ್ಞಾನದ ಅಂಧತೆಯಲ್ಲಿ ಮುಳುಗಿದ
ಲೋಕಕೆ ಜ್ಞಾನದಾವಳಿ..

ಹಣತೆ ಬೆಳಗುತ್ತಿದೆ,ಉರಿಯುತ್ತಿದೆ
ಮನುಜ ಉರಿಯುತ್ತಿರುವ,ಬೆಳಗುತ್ತಿಲ್ಲ

ಓ ಮನುಜ ಕುಲವೇ ಉರಿಯುವುದನ್ನು ನಿಲ್ಲಿಸು,ಬೆಳಗುವುದನ್ನು ಬೆಳೆಸು..
ಅದುವೇ ಹಣತೆಯ ಮಹಾದಾನ.......

- ನಕ್ಷtra

13 Jan 2017, 11:03 pm
Download App from Playstore: