ಕಣ್ಣೀರ ಕುಂಚದಿ ಗೀಚಿದ ಕವನ

ಈ ನೆನಪುಗಳು,
ಇಂದು ಎದುರಾಗಿ ನಾಳೆ ಮರೆಯಾಗಿ ಮುಂದೆ
ಕೊನೆಯಾಗುವುದೇನೋ ಎಂಬ ಭೀತಿ.

ಈ ಪ್ರೀತಿಯು,‌‍‌‌‌‌‌
ಇಂದು ಜೂತೆಯಾಗಿ ನಾಳೆ ವ್ಯಥೆಯಾಗಿ ಮುಂದೆ
ದುರಂತ ಕಥೆಯಾಗುವುದೇನೊ ಎಂಬ ಭೀತಿ.

ಈ ಕನಸು,
ಇಂದು ನನಸಾಗಿ ನಾಳೆ ಸೊಗಸಾಗಿ ಮುಂದೆ
ಬಿರುಸಾಗುವುದೇನೊ ಎಂಬ ಭೀತಿ.

ಈ ನೋವು,
ಇಂದು ಹತ್ತಿರವಾಗಿ ನಾಳೆ ಎತ್ತರವಾಗಿ ಮುಂದೆ
ಚಿರವಾಗುವುದೇನೊ ಎಂಬ ಭೀತಿ.

ಈ ವಿರಹ,
ಇಂದು ಸೆರೆಯಾಗಿ ನಾಳೆ ಸಮರವಾಗಿ ಮುಂದೆ
ಸೋಲಾಗುವುದೇನೊ ಎಂಬ ಭೀತಿ.

ಈ ಹೃದಯ,
ಇಂದು ಹಸಿಯಾಗಿ ನಾಳೆ ಹುಸಿಯಾಗಿ ಮುಂದೆ
ಹತವಾಗುವುದೇನೊ ಎಂಬ ಭೀತಿ.

ಈ ಮನಸು,
ಇಂದು ಕದಡಿ ನಾಳೆ ಮುದುಡಿ ಮುಂದೆ
ಮಡಿಯುವುದೇನೊ ಎಂಬ ಭೀತಿ.

ಈ ಸಮಯ,
ಇಂದು ಸಿಹಿಯಾಗಿ ನಾಳೆ ಕಹಿಯಾಗಿ ಮುಂದೆ
ವಿಷವಾಗುವುದೇನೊ ಎಂಬ ಭೀತಿ.

ಈ ಪ್ರೀತಿಯ ಬಿರು ಮಳೆಯಲಿ
ಈ ಭೀತಿಯ ಸಿಡಿಲು ಗುಡುಗಲಿ
ಈ ಫಜೀತಿಯ ಬಿರುಗಾಳಿಯಲಿ
ಸಿಕ್ಕ ಭಗ್ನ ಪ್ರೇಮಿ ಇವನು.....

--ಇಂತಿ ಅಂತು ದೇವದಾಸ್ ಆದ ಶಶಿ ಕಿರಣ

- ಅಕವಿ

17 Jan 2017, 02:11 pm
Download App from Playstore: