ಬಾಳೊಂದು ಬಂಗಾರ....

ಜೀವನ ನಗುವಿನ ಉಯ್ಯಾಲೆಯಾಗಲು ಪ್ರೀತಿ ಸ್ನೇಹದ ಸರಪಳಿಯ ಬಂಧನವಿರಬೇಕು,
ಬದುಕು ಅರ್ಥಪೂರ್ಣವಾಗಲು ಮಾನವೀಯ ಮೌಲ್ಯಗಳ ಅರಿವಿರಬೇಕು,
ಜನ್ಮವು ಸಾರ್ಥಕವಾಗಲು ನಿಸ್ವಾರ್ಥ ಸೇವೆಯ ಪುಷ್ಪ ಮಾಲೆಯ ಧರಿಸಬೇಕು,
ಸಾಧನೆಯ ಗೋಪುರವೇರಲು ಸೂಕ್ಷ್ಮಮತಿಯ ಕಠಿಣ ಪರಿಶ್ರಮದ ಸಮಯೋಚಿತ ಜ್ಞಾನವಿರಬೇಕು,
ಎಲ್ಲ ಗುಣ ಗೌರವಗಳಿಗೆ ಪಾತ್ರವಾಗಲು ಅಹಂಕಾರದ ಅಂಧಛಾಯೆಯನ್ನು ದೂರವಿರಿಸಬೇಕು,
ಭೂಮಿಯ ಮೇಲಿನ ಈ ಬಣ್ಣದಾಟ ಮುಗಿದಾಗಲು ಜನ ನಿನ್ನ ಸ್ಮರಿಸಲು ಪರೋಪಕಾರದ ಪರಮ ಸೇವೆಯ ನೀ ಮಾಡಿರಬೇಕು...

- Irayya Mathad

28 Jan 2017, 03:37 pm
Download App from Playstore: