ಅಂತರಂಗದ......ತೋಟ
ಅರೆಕ್ಷಣವೂ ಬಿಟ್ಟೂ ಬಿಡದ ಹಲಸಿನ
ಮೇಣದ ರೀತಿ ಎನ್ನ ಕವಿತೆ
ಬಾಳ ವದ್ರಾವಕ ಸಂಗತಿಗಳಲ್ಲಿ ನೀ
-ಉದ್ರೇಕವಲ್ಲ ,ಬದಲು ಭಾವ -ಚೈತನ್ಯ
ನಿನ್ನ ತೋಳ ಆಸರೆಯಲ್ಲಿ
ಅಕ್ಕರೆಯ ತುಂತುರು,ಮಮತೆಯ ತಂಬೆಲರು,ಚಂದ್ರನ ಆವರಿಸಿರುವ ತಾರೆಗಳಂತೆ, ನನ್ನ-ನಿನ್ನ ಭಾವ
ಬೆಳಕು ಮಿಡಿವ ಸಂತೆ
ಅಜ್ಜಿಯ ತಲೆ ನೇವರಿಕೆಯಂತೆ
ನಿನ್ನ ಆರೈಕೆಪರ ಮೌನ ರಾಗವು
ಸುಮಧುರ ಚೇತೋಹಾರಿ ಪದಗಳಲ್ಲಿ
ಮರುಕಳಿಸುವವೇ ?ನಡೆದ ಕಹಿ ಸ್ಮರಣೆಗಳು
ಗಗನ ಚುಕ್ಕಿ-ಭರಚುಕ್ಕಿಯಂತೆ
ನಮ್ಮ ಸಂವಾದ ವೈಖರಿಯು
ನಾನು ಹೊಂಬಿಸಿಲು,ನೀ ಹೊಂಗೆ ನೆರಳು
ಜೀವ ಮರಳಿದಂತೆ ನನಗೆ ನೀನಿತ್ತ ಭರವಸೆ
ಸಾಕಲ್ಲವೇ ನಿನ್ನ ಕಳಕಳಿ ,ನನಗೆ
ಉತ್ಸಾಹ -ಉಲ್ಲಾಸ ಒಟ್ಟುಗೂಡಿ
ಶತಕವಾದಂತೆ...
- ನಕ್ಷtra
29 Jan 2017, 10:34 pm
Download App from Playstore: