ಕಾಣದ ಬದುಕಿನ ಸುತ್ತ ಒಂದು ಸು

ಬದುಕೆಂಬ ಈ ಖಾಲಿ ಹಾಳೆಯಲಿ ಬರೆಯುವುದಾದರೂ ಏನನ್ನು...
ಆಸರೆಯ ಬಂಧನದೊಳಗಿನ ನಾಲ್ಕು ದಿನದ ಜೀವನ..
ಸ್ವಾರ್ಥದ ಬೇಹುದಿಯೊಳಗೆ ಬೆಂದು ಹೋದವರೆಷ್ಟೋ...
ಅಸತ್ಯದ ಕೂಪದೊಳಗೆ ಸತ್ತು ಬದುಕಿದವರೆಷ್ಟೋ..
ಬಚ್ಚಿಡಲು ಅದೇನು ಬಂಗಾರದ ಕಲಶವಲ್ಲ..
ಹಣವಿಲ್ಲದವನಿಗೆ ಕಾಸು ಮಾಡುವ ಹಂಬಲ ಒಂದೆಡೆಯಾದರೆ..
ಇದ್ದವನಿಗೆ ಅದನ್ನು ಹೇಗೆ ಬಚ್ಚಿಡಬೇಕೆಂಬ ಚಿಂತೆ...
ಮರ ಅದೆಷ್ಟೇ ಎತ್ತರಕ್ಕೆ ಹೋದರೂ ಜೋರಾಗಿ ಬೀಸುವ ಗಾಳಿಗೆ ತಲೆ ಒಡ್ಡಲೇಬೇಕು..
ಅಂತೆಯೇ ಮಾನವ ಸುಖದ ಸುಪ್ಪತ್ತಿಗೆ ಏರಿದ್ದರೂ ಒಂದು ದಿನ ಸಾವಿನ ಕುಣಿಕೆಗೆ ತಲೆಬಾಗಲೇಬೇಕು...

- ನಮಿತ ಗಟ್ಟಿ

30 Jan 2017, 07:02 pm
Download App from Playstore: