ಎಂದೂ ಮುಗಿಯದ ಗೋಳು

ಶೂದ್ರ ಕವಿಗಳ -ಲೇಖಕರಗಳ ಸಮಾನತೆ ಸಂದೇಶ
ಸುಟ್ಟು ಹಾಕಿರಿ
ದಾರ್ಶನಿಕರು - ಸಮಾಜ ಸುಧಾರಕರ ಭ್ರಾತತ್ವ ತತ್ವಗಳ ಮೂಲೆಗೆ ತಳ್ಳಿರಿ
ರಾಜಕೀಯವರ ಭರವಸೆಯ ಮಾತುಗಳು ಕಸದ ತೊಟ್ಟಿಗೆ ಎಸೆಯಿರಿ

ಭಾರತ ವಿಕಾಸ ಹೊಂದಿ ಏಳು ದಶ ವರ್ಷ ಬರುತ್ತಿದೆ
ನಾವು ಇನ್ನು ಕೊಳಚೆ ಸಂಸ್ಕೃತಿಯಲ್ಲಿ
ಬದುಕು ಸಾಗಿದೆ
ನರಿ ತೋಳಗಳು ಧರ್ಮದ ಹೆಸರಿನಲ್ಲಿ ದೂರ ತಳ್ಳಿದೆ
ನಮ್ಮ ಜೀವನ ಕನಸೆಂಬ ಕುದರೆ ಏರಿ ಸಾಗಿದೆ

"ಸಮಪಾಲು ಸಮಜೀವನ'"
ಹುಣ್ಣುಮೆ ಚಂದಿರನ ಆಗಮನ
ಹುಡುಕಿದನು ಬೆಳ್ಳಿಯ ಕಿರಣನ
ಮಿಂಚಿನಂತೆ ಮಾಯವಾದನು

ಆಶಾ ಭಾವನೆ ಬತ್ತಿ ಹೋಗುರಿವುದು
ಬದುಕುವ ಹಕ್ಕು ಕಿತ್ತು ಹೋಗುರಿವುದು
ಮುಕ್ತಾಯ ಎಂದು ಕೊನೆಗಾಣಸುವುದು
ಇಲ್ಲಾ ನಮ್ಮನ್ನ ಮಾರಣಹೋಮ ನಡೆಸುವುದು

- Shinan

31 Jan 2017, 07:01 am
Download App from Playstore: