ರವಿ ಉದಯಿಸಿದ....
ಜಗದೊಳು ಜಡತನ ತುಂಬಿರಲು
ಮನ ಮನೆಯಂಗಳ ಬೆಳಗಿಸಲು
ಕವಿದಿಹ ಕತ್ತಲ ಹೊಡೆದೋಡಿಸಲು
ಬಂದನು ಉದಯದ ಗಾನವ ಪಾಡಲು||
ಪ್ರಖರತೆಯೆಂಬ ತೇರನು ಏರಿ
ಕಿರಣಗಳೆಂಬ ಹೊನ್ನಿನ ದಾರಿ
ಬಂದಿತು ಭಾನುವಿನ ಕುದುರೆ ಸವಾರಿ
ಮಾನವ ಕುಲಕೆ ಶುಭವನು ಕೋರಿ||
ಹಕ್ಕಿಗಳ ಆ ಚಿಲಿಪಿಲಿ ಗಾನ
ಕರಗಿತು ಧರೆಯೊಳು ಅಡಗಿದ್ದ ಮೌನ
ದಶ ದಿಕ್ಕುಗಳಲಿ ದೇವರ ಧ್ಯಾನ
ಸನಿಹ ಸುಳಿಯದು ದುಃಖ ದುಮ್ಮಾನ||
- ನಮಿತ ಗಟ್ಟಿ
14 Feb 2017, 08:13 pm
Download App from Playstore: