ಕರುನಾಡ ಮುತ್ತು

ಕಗ್ಗತ್ತಲಲ್ಲಿ ಜನಿಸಿ
ಸ್ವ-ಪ್ರತಿಭೆಯಿಂದ ಬೆಳಕು ಕಂಡು|
ಹಾಡಿ ಕುಣಿದ ಎಲ್ಲರ ಮನವ ತಣಿಸಿ
ಜನತೆಗೆ ಬೆಳಕು ನೀಡಿದ ತಾನು ಕತ್ತಲನ್ನು ಉಂಡು||೧||

ನಾಟಕಕಾರನಾಗಿ ಜನಮನ ಗೆದ್ದ
ನಟನಾಗಿ ಜನರಿಂದ ಮೇಲೆದ್ದ|
ಮಾಡಿದನು ಮಯೂರ ನರ್ತನೆ
ಜನಪ್ರಿಯಗೊಳಿಸಿ ಸಿರಿಗನ್ನಡದ ಕೀರ್ತನೆ||೨||

ಮೊಗ್ಗಾಗಿ ಉದಯಿಸಿ ಹೂವಾಗಿ ಅರಳಿ
ಕನ್ನಡಾಂಬೆಯ ಕೊರಳಿಗೆ ಪುಷ್ಪಮಾಲೆಯಾಗಿ ಮೆರೆದ|
ನಟನಾಗಿ ಕುಣಿದು ಕೋಗಿಲೆಯಾಗಿ ಜನಮನ ತಣಿದು
ಕನ್ನಡಾಂಬೆಯಲ್ಲಿ ಲೀನನಾಗಿ ನಮ್ಮಿಂದ ದೂರ ಸರಿದ||೩||

ಆಗಿಲ್ಲ ಇವ ಸಾಕ್ಷರ
ಆದರೂ ಚರಿತ್ರೆ ಪುಟದಲ್ಲಿ ಇವ ಸುವರ್ಣಾಕ್ಷರ|
ಜನಮನದಿಂದ ಆಗನು ನಶ್ವರ
ಕರುನಾಡ ಪಾಲಿಗೆ ಇವನೇ ಈಶ್ವರ||೪||

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

16 Feb 2017, 08:32 am
Download App from Playstore: