ಜೀವನ
ಆಯಿತು ಜೀವಿಯ ಉಗಮ
ನಿನ್ನ ಕಡೆಗೆ ಆಗಮನ|
ಆಗುವುದೆಂದೋ ಅದು ನಿರ್ಗಮನ
ಅದರೆಡೆಗೆ ಇರಲಿ ನಿನ್ನಯ ಗಮನ||೧||
ಹುಟ್ಟಿದ ಪ್ರತಿ ಜೀವಿಯ ಉರುಗೋಲು
ನಿನ್ನಿಂದ ತಾನೇ ಸಾಗುವುದು ಈ ಬಾಳು|
ಓ ಬಾಳೇ ನೀ ಕೇಳು
ನಿನ್ನನ್ನೇ ನೀ ಆಳು||೨||
ಅರ್ಥ ಇಲ್ಲದ ಪದವೇ ಜೀವನ
ತಿಳಿದರೆ ಆಗುವುದು ಜನ್ಮ ಪಾವನ|
ನೋವು-ನಲಿವುಗಳ ಸಾಗರ
ಪ್ರೀತಿ-ಪ್ರೇಮದ ಆಗರ||೩||
ಸುಖ-ಸಂತೋಷದ ಅನುರಾಗ
ಇದಕ್ಕಾಗಿ ಮಾಡಲೇ ಬೇಕು ತ್ಯಾಗ|
ಕಳೆದು ಹೋಗುವುದು ಇದು ಬಹುಬೇಗ
ಕಡೆತನಕ ಉಳಿಯದು ಈ ತ್ಯಾಗ||೪||
ಸಾಹಸಕ್ಕೆ ಇಲ್ಲಿ ಜಯವುಂಟು
ಆವೇಶಕ್ಕೆ ಶತೃತ್ವ ನಂಟು|
ಪ್ರೀತಿಗೆ ಇಲ್ಲಿ ಬೆಲೆಯುಂಟು
ನೀತಿಗೆ ಇಲ್ಲಿ ಕಾಲವುಂಟು||೫||
ಎಲ್ಲರ ಜಾತೆಗೂಡುವ ಅನುಬಂಧ
ಇದು ಪ್ರತಿ ಜೀವಿಯ ಬಾಳಿನ ಸಂಬಂಧ|
ಅರಿತರೆ ನಾವು ಈ ಬಂಧ
ನಮ್ಮ ಬಾಳು ಆಗುವುದು ಮಕರಂಧ||೬||
ವ್ಯಕ್ತಿ-ವ್ಯಕ್ತಿಗಳ ಕಲಹಗಳು
ಜನತೆಯ ಯೋಚನಾ ಲಹರಿಗಳು|
ಇರುವೆವು ಹಲವು ಗುರಿಗಳು
ಸಾಧಿಸಲು ಹಲವು ದಾರಿಗಳು||೭||
ಜೀವನವೆಂಬ ಸಾಗರ ಆಗದು ಈಜಲು
ಈಜಲು ಈ ಬಾಳು ಬರೀ ಗೋಜಲು|
ಈಜಲೇ ಬೇಕು ಮುಂದಕ್ಕೆ ಸಾಗಲು
ಸಾಗಲೇ ಬೇಕು ದಡ ಸೇರಲು||೮||
ಉಳಿಯದು ಯಾವುದು ಕೊನೆತನಕ
ಅರಿಯದು ಇದು ನಮ್ಮ ಮನಕ|
ಆಸೆಯೆಂಬುದು ತೀರದ ತವಕ
ಆಶಯವೇ ಬೇಕು ನಮಕ||೯||
ಜೀವನ ಒಂದು ಸಾಗರ
ಬಾಳೇ ಕಣ್ಣೀರಿನ ಆಗರ|
ತುಂಬಿಸಿಕೊಳ್ಳಲು ನಮ್ಮ ಉದರ
ತೋರಲೇ ಬೇಕು ಎಲ್ಲರಿಗೂ ಆದರ||೧೦||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
16 Feb 2017, 08:03 pm
Download App from Playstore: