ಸುಮ್ಮನೇ ಗೀಚಿದ ಅಕ್ಷರ.
ಅಂಗಳದಲ್ಲಿ ಆಟದ ಮಸ್ತಿ ಇತ್ತು
ಮನೆಯಲ್ಲಿ ಅಮ್ಮನ ಪ್ರೀತಿ ಇತ್ತು
ಅಪ್ಪನ ಮಾತಿನಲ್ಲಿ ಕಾಳಜಿ ಇತ್ತು
ಕನ್ನಡ ಶಾಲೆಯಲ್ಲಿ ವಿದ್ಯೆ ಇತ್ತು.
ಇಂದು ಎಲ್ಲವೂ ಮರೆಯಾಗಿದೆ
ಪಂಜರದೊಳಗಿನ ಗಿಣಿಯಂತೆ
ಭವಿಷ್ಯ ಹುಡುಕುವುದೇ ಕೆಲಸ.
ಬರುವವರು ಬಂದು ಸುಮ್ನೆ
ಮೈಯಲ್ಲಿ ಗಾಯ ಮಾಡ್ತಾರೆ
ಕಾರಣ ಹೇಳದೆ ಹೋಗುತ್ತಾರೆ.
ಉಳಿದಿದೆ ಈಗ ಒಂದೇ ಕೆಲಸ
ರಾತ್ರಿ ಸ್ವಚ್ಛ ಬಾನಿನಲ್ಲಿ
ತಾರೆಗಳು ಏಣಿಸುವುದು.
*****
- ಕರಣ್ ಗಾವಡಾ
18 Feb 2017, 10:50 pm
Download App from Playstore: