ಸುಟ್ಟ ಸಾಲುಗಳು

ಹಸಿವ ರೋಗಕೆ ಬೆಂಕಿ ಇಟ್ಟು ಬೂದಿ ಮಾಡಿ ಹುಳಗಳ ಮಾರಣ ಹೋಮಕ್ಕೆ ಶಾಂತಿ ಸಿಗಲಿ...!
ಹೊತ್ತಿ ಉರಿವ ಹೊಟ್ಟೆಯೊಳಗೆ ತಣ್ಣೀರಾದರೂ ಎರಚಿ ನೋಡಿ....!!
ಟಾರು ಮೆತ್ತಿದ ಮುಖಕೆ ಚಂದಿರನೇ ಚರ್ಮವಾಗಲಿ..!
ನನ್ನೊಡಲ ಉರಿಯ ಬೆವರಿಗೆ ಬೆಳಕಿನ ತುಂಡು ಬಟ್ಟೆ ಕೊಡಿ....!!

ಒಡಲ ಹುತ್ತಕ್ಕೆ ಹಾಲೆರೆಯಲು ಬಂದು ಕೆಡವುವವರ ನಡುವಲಿ ಚಿಗುರೊಡೆಯುವ ಗೆದ್ದಲು ನಾನು..!
ಚಿವುಟಿ ಹಾಕೋ ಊಸರವಳ್ಳಿಯ ಉಸಾಬರಿಗೆ ಎಳ್ಳು ನೀರು ಬಿಡಿ..!!
ಕಾಣದ್ದು ಬೊಗಳುವ ಸೀಳು ತುಟಿಗಳಿಗೆ ಬೇರಿನ ಹೊಲಿಗೆಯಾಕಿಸಿ ಬಿಚ್ಚದಿರಲಿ..!

ಅವಿಜ್ಞಾನಿ

- ಅವಿಜ್ಞಾನಿ

22 Feb 2017, 08:59 pm
Download App from Playstore: