ತಂಪುಗಾಳಿ

ಗಾಳಿ ಬಿಸಲಿ ಮೋಡ ಸುರಿಯಲಿ
ಮಳೆಯು ಮೂಡಿದು ಬಂದಿದು ಬಂದಿತು,
ಹಸಿರು ಗಾಳಿಯು ತಂಪು ಧರೆಯಿತು
ಪಚ್ಚ ಎಲೆಗಳು ಹೊಳೆಯಲಿ.

ಸೂರ್ಯ ಮೂಡಲಿ ಜಗವ ಬೆಳಗಲಿ
ಬೆಳಗು ತಾನದಿ ಹೊಳೆಯಲಿ,
ಕಿರಣ ಕಾಂತಿಯು ಮೂಡಿಬಂದಿತು
ಸೂರ್ಯ ಕಾಂತಿಯು ತಿರುಗಿತು.

ಜನದಿ ಮನಗಳ ದನಿಯ ಕೂಗು
ಕೇಳಿ ಬಂದಿತು ಗಾಳಿಲಿ,
ಒಮ್ಮೆ ತಿರುಗಿ ನೋಡಿದಾಗ, ಅಲ್ಲಿ ನಗು
ಬಳಿಯ ಬಂದಿತು ಮೊಗದಲಿ.

ರೈತ ನೆತ್ತರ ಬಿಜವನೊತ್ತು
ಸಾಗಿ ಸಾಗಿ ನಡೆದು ಬಂದನು ಮುಂದೆ,
ಎತ್ತು ಬಂಡಿಯನು ಹೊಡೆದುಕೊಂಡು, ಎತ್ತ
ನೊಡದೆ ಬಂದಿತು ಮುಂದೆ ಮುಂದಗೆ.

ನಾಗರಾಜ್ ಎಸ್ ಟಿ
ಹೊಸದಡಗೂರು (ಪೊ)
ಮೊಳಕಾಲ್ಮೂರು (ತಾ)
ಚಿತ್ರದುರ್ಗ (ಜಿಲ್ಲೆ)
577540

- ST

26 Feb 2017, 07:50 pm
Download App from Playstore: