ನನ್ನ ಕವನ

ನಾ ಬರೆಯುವ ಮುನ್ನ,
ಕೇಳಿತೆನಗೆ ಎನ್ನ ಮನ,
ಯಾರಿಗಾಗಿ ಈ ಕವನ?

ಕ್ಚಣಕಾಲ ಯೋಚಿಸಿತು ನನ್ನ ಮನ,
ಹೌದಲ್ಲ, ಯಾರಿಗಾಗಿ ಈ ಕವನ?
ನನಗಾಗಿ, ನನ್ನ ಮನ ತೃಪ್ತಿ ಗಾಗಿ,
ಆಸಕ್ತಿ ತುಂಬಿದ ಓದುಗರಿಗಾಗಿ,
ಓದಿ ಮನಸೂರೆಗೊಂಡು ಹರಸುವರಿಗಾಗಿ.

ಕವನ ಬರೆಯಲು ನಾನೇನು ಕವಿಯಲ್ಲ,
ಶಬ್ದಗಳ ಭಂಡಾರ ನನ್ನಲ್ಲಿಲ್ಲ ,
ಕಾವ್ಯಲೋಕದ ಅರಿವು ನನಗಿಲ್ಲ ,
ನಾ ಬರೆಯುವುದು ನನ್ನ ಸವಿನೆನಪಿಗಾಗಿ,
ಅರ್ಥಪೂರ್ಣ ವಾದ ಕಾಲ ಹರಣಕ್ಕಾಗಿ.

ಇದು ಕವನವಲ್ಲ, ನನ್ನ ಅನುಭವ,
ಅಂದು ನಾ ಕಂಡ ವಾಸ್ತವ,
ನನಗನಿಸಿತು ಸತ್ಯ ಸಂಗತಿಯ ಬಿಚ್ಚಿಡುವ,
ಈ ಸಾಲುಗಳಲ್ಲಿ ಬರೆದ ಹಲವು ನುಡಿ,
ನಾ ನಡೆದು ಬಂದ ಭೂತಕಾಲದ ಕನ್ನಡಿ.

- ರವೀಂದ್ರಬಾಪೂರ(GNL)

05 Mar 2017, 09:57 am
Download App from Playstore: