ದುರ್ಗದಾ ಸಿರಿ
ಹೇಗೆ ವರ್ಣಿಸಲಿ ತಿಳಿಯದಾಗಿದೆ ಗಂಡುಮೆಟ್ಟಿದ ನಾಡನು
ಏಳು ತುತ್ತಿನ ಕೋಟೆಯನು
ನೊಡಲಿದು ಬರಿ ಕಲ್ಲಿನ ಕೋಟೆ
ಒಳ ಇಣುಕಿ ನೋಡಲು ಕಲ್ಲು ಕಲ್ಲು
ಹಾಡುವುದು ಕವಿತೆ
ನೋಡಲ್ಲಿ ನಿಂತಿಹರು ಅಲಮೇಲು_ರಾಮಾಚಾರಿ
ಅದುವೇ ಝಂಡಾ ಬತೇರಿ
ಚಾಮಯ್ಯ ಮೇಷ್ಟ್ರು ಬಿದ್ದಾಸ್ಥಳ
ಅದುವೇ ನೋಡು ತುಪ್ಪದ ಕೊಳ
ಹೇಗೆ ವರ್ಣಿಸಲಿ ತಿಳಿಯದಾಗಿದೆ.....
ಹಳೇಶಿಲಾಯುಗದ ಮಾನವನ ನೆಲೆಎಂದೋ?
ರಾಮನ ಅಜ್ಞಾತ ವಾಸದ ಸ್ಥಳವೆಂದೊ?
ಅಶೋಕ ಮಯೂರರ ಶಾಸನವಿದು ಎಂದೋ?
ಗಂಡುಗಲಿ ಮದಕರಿಯ ನಾಡೆಂದೋ?
ವೀರವನಿತೆ ಓಬವ್ವಳ ಬೀಡೆಂದೋ?
ಏನೆಂದು ವರ್ಣಿಸಲಿ ತಿಳಿಯದಾಗಿದೆ.....
ನೋಡಲ್ಲಿ ಸ್ವಾಗತಿಸುತ ನಿಂತಿಹಳು ಬನಶಂಕರಿ
ಅಲ್ಲೆ ತುಸುದೂರದಿ ಕುಲದೇವತೆ ಉಚ್ಚಂಗಿ
ಬರಗೇರಮ್ಮ_ತಿಪ್ಪಿನಕಟ್ಯಮ್ಮ ಭೇಟಿ ಉತ್ಸವ
ಇದಕೆ ಸಾಕ್ಷಿ ನಗರದೇವತೆ ಏಕನಾಥೇಶ್ವರಿ ಅವ್ವ
ಒಂದಾನೊಂದು ಕಾಲದಿ ಇದಾಗಿತ್ತು ರಾಜಬೀದಿ
ಇಂದಾಗಿದೆ ಪಬ್ಬು ಬಾರು ಸೇಂದಿಯಂಗಡಿ
ಒಂದಾನೊಂದು ಕಾಲದಿ ಹೇಗಿತ್ತು ನಾಯಕರ ಗೈರತ್ತು
ಇಂದಾಗಿದೆ ಗಣಿಮಾಲೀಕರ ಸ್ವತ್ತು
ಆದರೇನಂತೆ ಎಷ್ಟು ಬಾರಿ ಬರೆದರೂ ನವಯೌವ್ವನೆಯು ಕವಿ ಸಾಹಿತಿಗಳಿಗೆಲ್ಲ
ಅದೆಷ್ಟುಬಾರಿ ಹತ್ತಿಇಳಿದರೂ ಜೋತಿರಾಜ್
ಅಲಿಯಾಸ್ ಕೋತಿರಾಜ್ ಮನಸಿಗೆ ತೃಪ್ತಿಯೇಇಲ್ಲ
ದಿನಮಣಿಯು ಪಡುವಣಕೆ ನೀಡಲು ಚುಂಬನ ನಾಚಿನೀರಾದ ನಲ್ಲೆಯ ಕೆಂಪುಕೆನ್ನೆಯಂತೆ ಕಂಗೊಳಿಸುವ ಕೋಟೆಯನು ನೋಡುವುದೇ ಸುಮಧುರವಾದ ಕ್ಷಣ
ಕ್ಷಮಿಸಿ ಇನ್ನೇನು ಹೇಳಲಾರೆ ಕರ್ಪೂರದ ಗೊಂಬೆ ನಾನು
ದುರ್ಗಾಸ್ತಮಾನವಾಗುತಿದೆ ಮುಗಿಸಲೇ ಈ ಹಂಸಗೀತೆಯನ್ನು
_ಹಂಸಿನಿ
- ವಿಸ್ಮಯ
05 Mar 2017, 06:58 pm
Download App from Playstore: