ಗೆಲ್ಲುವ ಭರವಸೆ

ಅಂದವೊಂದಿದೆಡೆ ಸರ್ವವೂ ನಮದಾಗದು
ಚಂದದಿಂದ ಮೆರೆದರೆ ಸಕಲವೂ ನಮದಾಗದು|
ಮಂದಬುದ್ಧಿಯಿದ್ದರೆ ಜ್ಞಾನ ಸಂಪಾದನೆಯಾಗದು
ಕೋಲಾರದ ಕಂದನ ಯುಕ್ತಿಯೊಂದಿದೆಡೆ ಸರ್ವವೂ ವಶವಾಗುವವು||೧||

ಹಣವೊಂದಿದ್ದರೆ ಸುಖಜೀವಿಯಾಗನು
ಗುಣವೊಂದಿದ್ದರೆ ಕಾರ್ಯಸಾಧನೆಯಾಗದು|
ಮನವೊಲಿಸಿ ದುಡಿದರೆ ಗುರಿಸಾಧನೆಯಾಗುವುದು
ಕೋಲಾರದ ಕಂದನ ಯುಕ್ತಿಯೊಂದಿದೆಡೆ ಸರ್ವವೂ ವಶವಾಗುವವು||೨||

ವದೆ ತಿಂದರೆ ಸೋತವನಾಗನು
ಪದೇ-ಪದೇ ಪ್ರಯತ್ನವಿದ್ದರೆ ಗೆಲ್ಲುವನು|
ಎದೆಗುಂದದೆ ನಿಂತರೆ ಜಯಶೀಲನಾಗುವನು
ಕೋಲಾರದ ಕಂದನ ಯುಕ್ತಿಯೊಂದಿದೆಡೆ ಸರ್ವವೂ ವಶವಾಗುವವು||೩||

ಅರಿತು ನುಡಿದರೆ ಮಾತಿಗೆ ಬೆಲೆ
ಕಲಿತು ನುಡಿದರೆ ಕಲಿಕೆಗೆ ಬೆಲೆ|
ಮರೆತು ನುಡಿದರೆ ಮಾತಿಗಿಲ್ಲ ಬೆಲೆ
ಕೋಲಾರದ ಕಂದನ ಯುಕ್ತಿ ಮರೆತರೆ ಪ್ರಿತಿಗಿಲ್ಲ ಬೆಲೆ||೪||

ಕುರುಡನಿಗೆ ದಾರಿ ಕಾಣದು
ಕಾಮಾಂಧನಿಗೆ ಕಣ್ಣು ಕಾಣದು|
ಪ್ರೀತಿ ಮರೆತವನಿಗೆ ಈ ಲೋಕನೇ ಕಾಣದು
ಕೋಲಾರದ ಕಂದನ ಯುಕ್ತಿ ಮರೆತವನಿಗೆ ಅವನೇ ಕಾಣನು||೫||

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

06 Mar 2017, 07:29 pm
Download App from Playstore: