ಯುವವಾಣಿ
(*
ಜಗಕೆ ಸಾರುವೆನು ಯುಗವಾಣಿ
ವಿವೇಕಾನಂದರ ಯುವವಾಣಿ||ಪಲ್ಲವಿ||
ದುಡಕದಿರಿ ಎಂದಿಗೂ
ಧೈರ್ಯದಿ ಬಾಳಿರಿ|
ಭಯದಿ ಅಂಜದಿರಿ
ಧೈರ್ಯದಿ ಮುನ್ನುಗ್ಗುತ್ತಿರಿ||೧||
ವಿಶ್ವಾಸ ಬಿಡದಿರಿ
ಆಕ್ರೋಶ ಪಡೆಯದಿರಿ|
ಶಾಂತಿಯೇ ಎಲ್ಲದರ ಮೂಲ ಮಂತ್ರ
ಪ್ರೀತಿಯೇ ಮನ ಗೆಲ್ಲುವ ಯಂತ್ರ||೨||
ದೇಶಕ್ಕೆ ರಕ್ಷಣೆಯು ಈ ಯುವಜನತೆ
ಎಂದಿಗೂ ನೀವು ಕುಗ್ಗದಿರಿ|
ಗುರಿಯಿರಲಿ ಉತ್ತಮ ಸಾಧನೆಯೆಡೆಗೆ
ನಡೆಯಿರಲಿ ಈ ಕಾರ್ಯಪ್ರವೃತ್ತಿಗೆ||೩||
ಐಕ್ಯತೆಯೇ ನಮ್ಮ ಧ್ಯೇಯವು
ಜಾತಿ-ಭೇದ ತೊರೆಯಿರಿ|
ಲಿಂಗಸಮಾನತೆ ತನ್ನಿರಿ
ಎಲ್ಲರಿಗೂ ಪ್ರೀತಿಯ ತೋರಿರಿ||೪||
ಹುಚ್ಚಿನ ರಚ್ಚಲಿ ಬೀಳದಿರಿ
ಕಾಮದ ಬಲೆಯಲ್ಲಿ ಸಿಲುಕದಿರಿ|
ಆಗಲಿ ಹೃದಯಗಳ ಸಂಗಮ
ಪ್ರೀತಿಯೇ ಎಲ್ಲದರ ಮೂಲ||೫||
ದೇಶಕ್ಕಾಗಿ ಹೋರಾಡಿ
ರಕ್ತ ಕಣ-ಕಣ ಚೆಲ್ಲಿರಿ|
ಇತಿಹಾಸದ ಪುಟಪುಟದಿ
ಎಂದಿಗೂ ಎದೆಗುಂದದೆ ಮೆರೆಯಿರಿ||೬||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
08 Mar 2017, 08:23 pm
Download App from Playstore: