ಆಶ್ವಾಸನೆಗಳ ಮಹಾಪೂರ
ಆಶ್ವಾಸನೆಗಳ ಮಹಾಪೂರ,
ಅಷ್ಲೀಲ ಮನದ ನೋಟ,
ಬೇಡಿ ಕಾಲ್ ಮುಗಿದು,
ಗದ್ದುಗೆ ಗಿಟ್ಟಿಸಿಕೊಂಡಮೇಲೆ,
ಗುಟ್ಟಾಗೇ ಉಳಿದೀತು,
ಆಶ್ವಾಸನೆಗಳ ಮಹಾಪೂರ.
ಅನುದಾನದ ಭರವಸೆ,
ಶ್ವೇತ ವರ್ಣದ ಉಡುಪು ನೈದು,
ಬಿಳಿ ಬಣ್ಣವ ಮೈಲಿಗೆ ಗೈದು,
ಅಂತರಾಳದಿ ಕ್ರೌರ್ಯವನೊಯ್ದು,
ಸುಟ್ಟು ಬೂದಿ ಯಾಗಿದೆ,
ಅನುದಾನದ ಭರವಸೆ.
ನಡು ಇರುಳಲೂ ಸ್ತ್ರೀ ಭದ್ರತೆ,
ಮಡದಿಯರ ಕೊರಳು ತುಂಬಿಸಲು,
ಜರದಾರಿ ಉಡುಪಿನಾಸೆ ಮೆರೆಸಲು,
ಡಾಬು ಕಟ್ಟಿ, ಮಗಳಿಗೆ ನಾಲ್ಕಾರು ಬಂಡಿಗಳು,
ಸಾಮಾನ್ಯ ಹೆಣ್ಣಿನ ಹರಣ ಇರುಳು ಕರಾಳ,
ಇನ್ನೆಲ್ಲಿಂದಾದೀತು ಸ್ತ್ರೀ ಭದ್ರತೆ.
ಸಮಾಜಮುಖಿ ಇಲ್ಲಾರೂ?
ನಾಡ ಜನತೆಯ ಪ್ರತಿನಿದಿಯು ಯಾರು?
ಮನಸು ಕೂಗಿ ಹೇಳದೆ ಇವರಿಗೆ?
ಅಶ್ವಾಸನೆಗಳ ಕಿಂಚಿತ್ತು ಕಾಳಜಿ ಇಲ್ಲವೇ?
ಕರ್ಮವಿಹುದು ಸಾಹೇಬ ಎಚ್ಚೆತ್ತುಕೊ,
ತಡವಾದೀತು, ಸಮಯ ಬಾರದಾದೀತು,
ಅನ್ಯಾಯಗಳಿಗೆ ಇನ್ನಾದರೂ ಕೊನೆ ಕಂಡುಕೋ...
-ಕನ್ನಡದ ಭಕ್ತ
- ಕನ್ನಡದ ಭಕ್ತ
09 Mar 2017, 05:00 pm
Download App from Playstore: