ಬೆಂದು ಮೂಡಿದಾ ಭರವಸೆ

ನಗುವೊಂದು ಬರಬಾರದೇ
ಕವಿಯ ಬಸಿರಿನಲಿ
ಸಾಹಿತ್ಯದಾ ತೆನೆ ವಸರಿ
ಕಾವ್ಯದಾ ಹೆರಿಗೆಯಾದಂತೆ

ಮಳೆಯೊಂದು ಬರಬಾರದೇ
ಬಿಸಿಲ ಬೇಗೆಯಲಿ ಬೆಂದು ಬಾಯಾರಿ ನಿಂತ ಧರಣಿ ಎಂಬ ತರುಣಿಯೊಡಲಲಿ
ಹಸಿರಸಿರಿ ನಳನಳಿಸುವಂತೆ

ಬೆಳಕೊಂದು ಬರಬಾರದೇ
ಕತ್ತಲು ತುಂಬಿದ ಕಂಗಳಿಗೊಮ್ಮೆ
ನೇತ್ರದಾನದಿ ದೃಷ್ಟಿಮೂಡಿ
ಬೆರಗುಗಣ್ಣಲಿ ಜಗವ ಕಾಣುವಂತೆ

ನೀ ಸಿಗಬಾರದೇ ಹೇಳು
ಮನದುಗಿಬಂಡಿಯಲಿ ಕೊತಕೊತ ಕುದಿಯುವ ಭಾವನೆಗಳ ಚುಕುಬುಕುವನು
ನಿಲ್ಲಿಸುವ ನಿಲ್ದಾಣದಂತೆ

ಕನ್ನಡಿಯ ಗಂಟಿದು ಹೇಗೆ ತೆರೆಯಲಿ
ಬದುಕೊಂದು ಒಗಟು ಹೇಗೆಬಿಡಿಸಲಿ
ಈ ಕುರುಡು ಕಂಗಳಿಗೂ ನಗುವಾಸೆ ಒಮ್ಮೆ
ಎಲ್ಲಿ ಹುಡುಕಲಿ

ಕೊರಗದಿರು ಎಲೆಮನವೆ ಜಗವು ಕೊರತೆಗಳ ಮಹಾ ಸಂತೆ
ತಮ್ಮ ಮನದೂನವ ಕಾಣದಾ ಕುರುಡರು
ದುರ್ಬೀನಿನಲ್ಲಿ ಪರರ ಊನವನು
ಹುಡುಕುವರು

ಮೂರು ಗಂಟಿಗೆ ಬೇಕು ಪ್ರೀತಿಯಾನಂಟು
ಮುಖವಾಡಕೆ ಬೇಕು ಸೌಂದರ್ಯದಾ ಒಣ ಅಂಟು
ಮುಖವಾಡಕೆ ಮನಸೋಲುವವರು ಅವರಂತೆ
ಅಂತಹವರಿಗಾಗಿ ಕಣ್ಣೀರಿಡುವುದು ಸರಿಯುಂಟೇ?

ದಾರಿಕಾಣದಾಗಿರಲು ನೀ ನಿರ್ಮಿಸಿಕೋ ನಿನ್ನದೇ ದಾರಿಯ
ಅದೆಷ್ಟು ಜನ ಹಿಡಿದುಬರುತಿಹರು ನೋಡು ನಿನ್ನ ದಾರಿಯ
ನೀನೀಗ ಅವರೆಲ್ಲರಿಗೂ ಮಾದರಿ
ಆಗಸವ ಸ್ಪರ್ಶಿಸಲೆತ್ನಿಸುತಿಹರು ನಿನ್ನ ನಿರಾಕರಿಸಿದವರು ಇಂದು ಹಾರಿ ಹಾರಿ

ಹಂಸಿನಿ

- ವಿಸ್ಮಯ

13 Mar 2017, 06:37 pm
Download App from Playstore: