ಓ ಮೋಡವೆ ಏಕೆ ಓಡುವೆ

ಓ ಮೋಡವೆ ಏಕೆ ಓಡುವೆ
ಬಾಯಾರಿ ಬಸವಳಿದ ನರ
ಮನುಜರನು ಕಂಡು ?
ಬರಲಿಲ್ಲವೇ ಕರುಣೆ
ಕಾದಿಹಳು ಧರಣಿ
ಹನಿ ನೀರ ಕಾಣದೆ ಹಸಿದಿಹುದು
ಆಕೆಯೊಡಲು.
ಸ್ವಾರ್ಥಿಗಳು ನಾವು,
ಕೊಚ್ಚಿದೆವು ಮರ ಗಿಡಗಳ
ಅವು ನಿನ್ನ ಹಳೆ ಗೆಳೆಯರೆಂಬುದ ಮರೆತು.
ಮುಚ್ಚಿದೆವು ಕೆರೆ ಕಟ್ಟೆಗಳ
ಮೂಡತನದಲಿ ನಾವೇ
ಮುಂಬರುವ ಬರಗಾಲ ಬರಲಾರದೆಂದು.
ಊರಿಗೊಂದು ಕೆರೆ ಇರುವ ಬದಲು
ಕೇರಿಗೆ ನಾಲ್ಕು ಗುಡಿಗಳನು ಕಟ್ಟಿ
ಕೇಳಿಕೊಂಡೆವು ಕಲ್ಲ ದೇವರ
ಕೊಡು ನೀರ, ಸುರಿಸು ಬಿರು ಮಳೆಯ
ಎಂದೂ ಏನೂ ಕೊಡದ ದೇವರಿಗೆ
ಸುರಿದೇವು ಹಾಲ್ಮೊಸರ ಕೊಡದ ತುಂಬ
ಮರೆತೇವು ನಿಜ ದೇವರ
ಮೆರೆಸೇವು ಕಳ್ಳ ಕಾಕರ
ಮರುಳರಾಗಿ ತಬ್ಬಿಕೊಂಡೆವೋ
ನಮ್ಮ ಅವನತಿಯ...

- ಶ್ರೀಗೋ.

17 Mar 2017, 07:33 am
Download App from Playstore: