ಸುಮ್ಮನೇ ಸತ್ತು ಬಿಡಿ.

ಸುಮ್ಮನೆ ಸತ್ತು ಬಿಡಿ
ಏಕಾಂತದೆ ಮನದೊಳಗೆ ಬಂದ ಕನಸನ್ನು
ನನಸಾಗಿಸುವ ನವ್ಯ ಚಿಂತನೆಗಳೇ...
ಜಾತಿಗಳು ಮತವಾಗತೊಡಗಿದೆ
ನೀತಿ ನಿಯಮ ತಪ್ಪಿದೆ.
ಬೆಳಕನ್ನೂ ಕ್ಷಣದಲ್ಲಿ ಕತ್ತಲಾಗಿಸುವ
ಕಂಡೂ ಕಾಣದ ಕೈಗಳು
ಕಾಣದಂತೆ ವ್ಯವಸ್ಥೆಯ
ತಮ್ಮ ಕಪಿಮುಷ್ಠಿಯಲ್ಲಿ ಹಿಡಿದು
ಕೊಂಡಿದೆ... ಅಯ್ಯೋ ಗಟ್ಟಿಯಾಗಿ
ಹೇಳದಿರಿ ಸಮತಟ್ಟವಾದ ಭುವಿಯಲ್ಲಿ
ಗುಂಡಿಗಳು ಬಿದ್ದಿವೆ. ..
ನಿಜ ಸುಳ್ಳು ಎಲ್ಲರಿಗೂ ಗೊತ್ತಿಲ್ಲವೆಂದೇನಲ್ಲ
ಕರ್ತವ್ಯದ ಚುಕ್ಕಾಣಿ ಹಿಡಿದಿರುವ
ಕೈಗೆ ಸಂಕೋಲೆ ತೊಡಿಸಿ ಅಧಿಕಾರ
ನೀಡಲಾಗಿದೆ...
ಅಂದ್ಯಾರೋ ಹೇಳಿದ ಮಾತು
ಇಂದು ನಿಜವೆನಿಸತೊಡಗಿದೆ
ಬದುಕಬೇಕೆಂದರೆ ಜಗದ
ಜನರೊಳಗೆ ಮಾತು ಬೆಳ್ಳಿ ಅಲ್ಲ ( ತಳ್ಳಿ)
ಮೌನ ಬಂಗಾರವಾಗಿದೆ...!!
ಅನು..

- Anu...

20 Mar 2017, 11:49 am
Download App from Playstore: