ಆಕಾಶವಾಣಿ... ವಾರ್ತೆಗಳು
ಒಂದಾನೊಂದು ಕಾಲದಲ್ಲಿ
ಹಳೇ ಕಾಲದ ರೇಡಿಯೋದಲ್ಲಿ
ಉಪೇಂದ್ರ ರಾವ್, ರಂಗ ರಾವ್
ಸುಧಾ ದಾಸ್ ಅವರುಗಳು
ವಾರ್ತೆ ಓದುತ್ತಿದ್ದುದು
ಬಹಳಾ ಚೆಂದವಿತ್ತು..
ಆರ್ಕೆ ದಿವಾಕರ
ಚಿತ್ತರಂಜನ್ ದಾಸ್
ಮುಂತಾದವರ ಪ್ರದೇಶ ಸಮಾಚಾರ
ಮುದವಾಗಿ ಕಿವಿಗೆ ಅಡರುತ್ತಿತ್ತು.
ಮುಂದೇನಾಯ್ತೆಂದರೆ..
ರೇಡಿಯೋಗಳ ಜಾಗದಲ್ಲಿ ಬಂದು ಕುಳಿತ
ಮೂರ್ಖರ ಪೆಟ್ಟಿಗೆಯಲ್ಲಿ
ದೂರ ದರ್ಶನವನ್ನು
ಅಡಚಣೆಗಾಗಿ ಕ್ಷಮಿಸುತ್ತ
ಹತ್ತಿರ ಮಾಡಿಕೊಂಡಂತೆಯೇ...
'ಉದಯ'ವಾದವು ಹೊಸ
ಖಾಸಗಿ ವಾಹಿನಿಗಳು...
ವಾರ್ತೆಗಳನ್ನು ಓದುತ್ತಿದ್ದವರ
ಕಾಲ ಸರಿದು..
ವಾಕರಿಕೆ ಬರುವಂತೆ ವದರುವವರ
ಕಾಲ ಸುರುವಾಯ್ತು.
ಸುದ್ದಿ ಹೆಕ್ಕಿ ತರುವವರೇ
ಸುದ್ದಿಯನ್ನು ಸೃಷ್ಟಿಸಲಾರಂಭಿಸಿ..
ಸುದ್ಧಿಗಿಂತ ಹೆಚ್ಚಾಗಿ
ಸದ್ದುಗಳೇ ತುಂಬಿ ಹೋಗಿ...
ಸಂದರ್ಶನಕ್ಕೆ ಕೂತರೆ..
ಉತ್ತರಕ್ಕಿಂತ ಪ್ರಶ್ನೆಗಳೇ ಉದ್ದವಾಗಿ..
ಮುಗಿಯದ ಪ್ರಶ್ನೆಗೆ ಉತ್ತರಿಸಲು
ಅತಿಥಿಗೆ ಸಮಯ ಸಾಲದೇ ಎದ್ದು ಹೋಗಿ...
ನೋಡುಗರ ತಿಥಿ ಆಗುವ ಹೊತ್ತಿಗೆ
ವಾರ್ತಾ ಪ್ರಸಾರ ಮುಕ್ತಾಯವಾಯಿತು !
- ಶ್ರೀಗೋ.
24 Mar 2017, 09:04 pm
Download App from Playstore: