ವಿಚಾರವಾದಿ ಯುಗಾದಿ

ಹೊಸ ದಿಗಂತಕೆ ಹೊಸ ವರುಷದ ಆಗಮನ
ಚಿಮ್ಮಲಿ ಎಲ್ಲೆಲ್ಲೂ ನವೋನ್ಮೇಷ ಚೇತನ
ಇನ್ನೇಕೀ ಏಕತಾನತೆಯ ತಾಡನ
ಪ್ರಕೃತಿಗೆ ವಸಂತ ನೀಡುತಿರಲು ಚುಂಬನ
ನಮಗೆಂದೆಂದೂ ಇರಲಿ ಅವಳೊಲವ ಆಲಿಂಗನ
ಅವಳಿಂದಲೆ ತಾನೇ ನಮ್ಮಯ ಜೀವನ
ಸದಾ ತುಂಬಿ ತುಳುಕಲಿ ಭೂದೇವಿಯ ಹೃಣ್ಮನ

ದುಂಬಿಗಿರದ ಮಕರಂದದ ಮೂಲ ತಿಳಿಯುವಾ ಚಿಂತೆ ನಮಗೇಕೆ.?
ಕೋಗಿಲೆ ಓದಿದೆಯೇ ಶಾಸ್ತ್ರ ಪುರಾಣಗಳ ಕಂತೆ?
ಯಾರಿಗಿರದಾ ಜಾತಿ ಮತದ ಕಂತೆ ಮಾನವಾ ನಿನಗೇಕಂತೆ?
ಸುಮ್ಮನೆ ಕರಗು ಬಾ ರಸಿಕ ಪ್ರಕೃತಿಯಲಿ
ಮುಗ್ಧ ಮಗುವಿನಂತೆ

ಸೊರ್ಯಚಂದ್ರ ಗ್ರಹತಾರೆಗಳ ಗ್ರಹಚಾರ ಬಿಡಿಸಿ, ಮಾಡುವುದೇನಿದೆ ಭವಿಷ್ಯದ ಬಲೆಯನು ಬಿಡಿಸಿ
ವಿಜ್ಞಾನದ ಬೆಳಕಲ್ಲಿ ವೈಚಾರಿಕತೆಯ ಕಣ್ ತೆರೆದು ನೋಡು ಬಾರಾ
ಇಡೀವಿಶ್ವವೇ ಕಾಣುವುದು ವಿಸ್ಮಯದ ಮಹಾಪೂರ

ಹಸಿದವನಿಗೆ ಒಂದಗುಳು ನೀಡದೆ ಹಬ್ಬವ ಮಾಡಿ ಏನು ಫಲ
ಮರಗಿಡ ಕಡಿದು ಮನೆಮುಂದೆ ತಳಿರು ತೋರಣ ಕಟ್ಟಿದರೇನು ಫಲ
ಪೂರ್ವಜರು ಮಾಡಿಹರೆಂದು ಮಾಡದಿರಿ ಮೂಢತನದ ಪರಮಾವಧಿ
ಪ್ರಗತಿಯ ಹೆಸರಲಿ ತೋಡದಿರಿ ನಿಮ್ಮದೇ ಸಮಾಧಿ

ಪ್ರಗತಿಯು ಬೇಕಿದೆ ಪ್ರಾಕ್ತನ ಮನಸಿಗೆ ಇದುವೇ ಬದುಕಿಗೆ ಬುನಾದಿ
ಮಾಡಿದರೆ ಮಾಡಿ ಕಾರಣ ತಿಳಿದು
ಈ ಜ್ಞಾನ ಅನಾದಿ
ತರ್ಕದಿ ಒರೆದು ಪ್ರತಿಯೊಂದ ಅರಿತು
ಮಾಡೋಣ ವಿಚಾರವಾದಿ ಯುಗಾದಿ

ಹಂಸಿನಿ

- ವಿಸ್ಮಯ

29 Mar 2017, 06:47 am
Download App from Playstore: