ಹುಚ್ಚರು

ಶೋಧಿಸುತಿರುವೆ ಹೃದಯದಲ್ಲಿಳಿದು ನೀನು ನೆಲೆಸಿದ ಕುರುಹು ಬಸಿದು ಬಸಿದು
ಮಾಸಿದ ನೆನಪಿನ ಕಲೆಗಳು ಮನದಿಂದ ಹೊರಬಿದ್ದವು ಬಣ್ಣ ಬಳಿದುಕೊಳ್ಳುತ್ತಾ

ನಿನಗೆ ಅಪರಂಜಿಯ ಪಟ್ಟಕೊಟ್ಟು ನಾನು ಜನರಿಗೆ ಅಪಹಾಸ್ಯನಾದೆ ನನಗೆ ನಾನೇ ಪ್ರಶ್ನೆಯಾದೆ ಬದುಕಿನ ಆದಿ ಅಂತ್ಯ ಅರಿಯದೆ

ನದಿಯೂಁಚಿಂತಿಸುತ್ತಿದೆ ನಾನು ಯಾವಾಗ ಹೇಗೆ ಮುಳುಗುವೆ ಎಂದು ದೋಣಿ ಸಜ್ಜಾಗಿದೆ ಲಗಾಮು ಮರೆತು ಲಂಗರಿಲ್ಲದ ಕಡೆ ಸಾಗಲು

ಯಾರೊ ಗೀಚಿದ ಅಮರಪ್ರೇಮದ ಸಾಲು ಅಮ್ರತವೆಣಿಸಿ ಹೃದಯಕಿಳಿಸಿ ಖಚಿತ ಉಡುಗೊರೆ ಪಡೆದು ಶೋದನೆ ಮುಗಿಸಿ ಶೋಕಸಾಗರದಲ್ಲಿ ನನ್ನವರನು ಅದ್ದಿದೆ..
✍ಆದಿಲ್ ಕೋಟೇಶ್ವರ

- adilsha

01 Apr 2017, 08:31 am
Download App from Playstore: