ರಾಧೆಯ ಪ್ರೇಮ

ನವಿಲು ಗರಿಯ ಮುಡಿದು
ಕೊಳಲ ಹಿಡಿದು ಬರುವ
ಶ್ರೀ ಕೃಷ್ಣನ ದಾರಿಯ ಕಾದಿರೋ ರಾಧೆಯ
ಮನಸಿನ ಮಾತದು ಬೇಗನೇ ಬಾರಯ!!

ಸಣ್ಣದೊಂದು ಹೂವ ಮಾಲೆ
ಕರದಿ ಹಿಡಿದು ಕಾದಿರೋ ನಲ್ಲೆ
ಸುತ್ತ ಕಣ್ಣ ಹೋರಳಿಸಿ ಕಾದಳು
ಎತ್ತ ಅವನು ಬರುವನು ಎಂದು!!

ಮನದಿ ಅವನ ಸೇರೋ ತವಕದಿ
ಕಾದು ಕುಳಿತಳು ಒಲವಿನ ಪುಳಕದಿ
ಅವನು ಎದುರಿಗೆ ಕಾಣದೇ ಇರಲು
ಶಪಿಸಿ ನೊಂದಳು ತನ್ನ ಕಂಗಳ!!

ಅವನ ಹುಡುಕಲು ಹೆಜ್ಜೆ ಕಿತ್ತರೆ
ಕೊಳಲ ದನಿಯ ಸ್ವರವು ಕಿವಿಯಲಿ
ದನಿಯ ಮಾರ್ಗವ ಹಿಡಿದು ಓಡಲು
ಕಂಡ ಕೃಷ್ಣನು ಗೋವುಗಳ ಹಿಂಡಲಿ!!

- ಪಿ.ಜಿ.ಜ್ಯೋತಿ

06 Apr 2017, 10:10 am
Download App from Playstore: