ರಾಧಾ ರಮಣ
ರಾಧಾ ರಮಣ
ಯೆಶೋಧಾ ನಂದನ
ನವನೀತ ಚೋರಾ
ನಂದನ ಕುಮಾರ .
ಗೋಕುಲ ಕೃಷ್ಣಾ
ಗೋಪಾಲ ಕೃಷ್ಣಾ
ಬೇಗನೆ ಬಾರೋ
ಮುರಳೀಧರ.
ಕದ್ದ ಹೃದಯವ
ಹಿಂತಿರುಗಿಸಬೇಡ.
ಅಲ್ಲಿರುವ ನಿನ್ನ ರೂಪಕೆ
ಉಸಿರಾಗು ಸಾಕು.
ನಿನ ನಾಮ ಸ್ಮರಣೆಯಲಿ
ಇಡೀ ಜೀವನ ಕಳೆಯುವೆ
ನಿನಗಾಗಿ ಕಾದಿರುವ ಈ ಜೀವಕೆ
ನಿನ್ನ ಹೆಸರೇ ಇಡುವೆ.
ಕನಸಲ್ಲಿ ನನಸಾಗು
ನೆನಪಲ್ಲಿ ನಗುವಾಗು
ಮಾತಲ್ಲಿ ಧ್ವನಿಯಾಗು.
ನನ ಎದೆಬಡಿತದ ಸದ್ದಾಗು
ನನ್ನಲ್ಲಿರುವ ಜೀವವಾಗು
ಆ ಜೀವಕ್ಕೆ ಜೊತೆಯಾಗು......
ಶ್ರೀ
- ಚುಕ್ಕಿ
06 Apr 2017, 05:43 pm
Download App from Playstore: