ರಾಧಾ ರಮಣ

ರಾಧಾ ರಮಣ
ಯೆಶೋಧಾ ನಂದನ
ನವನೀತ ಚೋರಾ
ನಂದನ ಕುಮಾರ .

ಗೋಕುಲ ಕೃಷ್ಣಾ
ಗೋಪಾಲ ಕೃಷ್ಣಾ
ಬೇಗನೆ ಬಾರೋ
ಮುರಳೀಧರ.

ಕದ್ದ ಹೃದಯವ
ಹಿಂತಿರುಗಿಸಬೇಡ.
ಅಲ್ಲಿರುವ ನಿನ್ನ ರೂಪಕೆ
ಉಸಿರಾಗು ಸಾಕು.

ನಿನ ನಾಮ ಸ್ಮರಣೆಯಲಿ
ಇಡೀ ಜೀವನ ಕಳೆಯುವೆ
ನಿನಗಾಗಿ ಕಾದಿರುವ ಈ ಜೀವಕೆ
ನಿನ್ನ ಹೆಸರೇ ಇಡುವೆ.

ಕನಸಲ್ಲಿ ನನಸಾಗು
ನೆನಪಲ್ಲಿ ನಗುವಾಗು
ಮಾತಲ್ಲಿ ಧ್ವನಿಯಾಗು.

ನನ ಎದೆಬಡಿತದ ಸದ್ದಾಗು
ನನ್ನಲ್ಲಿರುವ ಜೀವವಾಗು
ಆ ಜೀವಕ್ಕೆ ಜೊತೆಯಾಗು......

ಶ್ರೀ

- ಚುಕ್ಕಿ

06 Apr 2017, 05:43 pm
Download App from Playstore: