ಅಂದು ಸಂಜೆ.......
ಅಂದು ಸಂಜೆ............................ .. ಅಂದು ಸಂಜೆ ಕಡುಗೆಂಪು ಬೆಳಕಿನಲಿ
ಅ ದಿಬ್ಬದ ಮೇಲಿನ ಒಂಟಿ ಮಾವಿನ ಮರದ ಕೆಳಗೆ ಕುಳಿತು ಯೋಚಿಸುತ್ತಿದ್ದೆ ಅವಳ ನೀರೀಕ್ಷೇಯಲಿ.
ತಂಗಾಳಿ ಬೀಸುತ್ತಿತ್ತು ಎಲ್ಲೆಡೆ ಚಿಗುರೋಡೆದಿತ್ತು ನನ್ನ ಮನಸ್ಸು ಆರಳಿತ್ತು.
ನನ್ನ ಮುಂದೆ ಹಾದು ಹೋಗುವ ಕಾಲುದಾರಿಯನ್ನೆ ನೋಡುತ್ತಿದ್ದೆ ತದೇಕ ಚಿತ್ತದಿಂದ.
ದೂರದಿಂದೊಂದು ಆಕಾರ ಸಕಾರಗೊಳ್ಳುತ್ತ ಬಂದು ನನ್ನೆದಿರು ನಿಂತಿತು ಆ ಹುಡುಗಿಯ ರೂಪದಲಿ.
ನನ್ನನ್ನು ನಾನು ನಂಬದಾದೆ
ಹೃದಯ ತಲ್ಲಣಿಸಿತ್ತು ತಳಮಳಗೊಂಡೆ
ಇರಲಿ ಎಂದು ಬಿಗಿದಪ್ಪಿ ಮುತ್ತು ಕೊಟ್ಟೆ
ಹಾಗೆಯೇ ಮಾಯವಾದಳು ಆ ಹುಡಗಿ. ಬೆಚ್ಚಿಬಿದ್ದು ಕೂಗಿ ಕರೆದೆ ಸುತ್ತೆಲ್ಲ ಹುಡುಕಿದೆ
ಸಿಗಲ್ಲಿಲ್ಲ ,ಕಾಣಸಲಿಲ್ಲ..
ಎಲ್ಲೆಲ್ಲೂ ಅನುರಣಿಸಿದಂತಾಯಿತು
"ನಾನು ನಿನ್ನ ಕನಸಲಿ ಮನಸಲಿ ಮಾತ್ರ ಇರುವೆ
ನಾನು ನಿನ್ನ ನೆನಪಲಿ ನೆನಪಾಗಿ ಉಳಿವೆ
ನಾನು ತಿರುಗಿಬಾರದ ನಾಡಲ್ಲಿರುವೆ".
- ಶಶಿಧರ ಹೆಚ್ ಎನ್
06 Apr 2017, 10:42 pm
Download App from Playstore: