ನಾ ಸತ್ತಮೇಲೆ
ನಾ ಸತ್ತಮೇಲೆ ನನ್ನ ಸುಟ್ಟ ಭೂದಿಯೂ
ಈ ನೆಲದ ಮೇಲೆ ಉಳಿಯಲು ನನಗಿಷ್ಟ ಇಲ್ಲ....
ಈ ಪಾಪಿ ಜನರು ಅದನ್ನೂ ತುಳಿದು ಹೋಗುತ್ತಾರೆ.
ಭೂತಾಯಿಯ ಮಡಿಲಲ್ಲಿ ಶಾಶ್ವತವಾಗಿ
ಬಚ್ಚಿಟ್ಟುಕೊಂಡರೆ ಸಾಕು ಇವರಿಗೆ ಕಾಣದ ಹಾಗೆ...
ಬದುಕಿದ್ದಾಗ ಕ್ಷಣಮಾತ್ರವು ನಿಲ್ಲದ ಕಣ್ಣೀರು
ಕೊನೆಯುಸಿರು ಎಳೆದಾಗಳಾದರು ನಿಂತರೆ ಸಾಕು..
ಮುಕ್ಕೋಟಿ ದೇವರು ಇರುವುದು ನಾಮಮಾತ್ರಕ್ಕೆ
ಕಷ್ಟದಲ್ಲಿ ಕಾಪಾಡಲು ಒಂದು ಕೈ ಸಿಗಲ್ಲ ಇವರದು.
ನಿತ್ಯ ಪೂಜೆ, ಅಲಂಕಾರ,ಅಭಿಷೇಕ,ರಥೋತ್ಸವ
ಕಲ್ಯಾಣ ಈ ಜನರು ಮರತೆ ಹೋಗಿದ್ದಾರೆ.........
ಎಲ್ಲೋ ಇದ್ದ ಕಲ್ಲು ಬಂಡೆಯ ಕೆತ್ತ ಶಿಲ್ಪ ಈ ದೇವರೆಂದು.
ಭೂಮಿಯಲ್ಲಿ ಸಿಕ್ಕ,ಬಂಗಾರ,ತಾಮ್ರ,ಬೆಳ್ಳಿಯಲ್ಲೇ ದೇವರ ಮೂರ್ತಿಗಳೆಂದು.......
ಕೆತ್ತವನು,ವಿಗ್ರಹ ಮಾಡಿದವನು ಕೊನೆಗೂ ಸೇರುವುದು ಅವನಿಯ ಮಡಿಲಿಗೆ ಅದಕ್ಕೆ ಜೀವನದಲ್ಲಿ,ಜೀವಹೋದ ನಂತರ ನಮ್ಮನ್ನು ಹೊರುವುದು ಅವಳೇ..........
ಕೊನೆವರೆಗೂ ನಾ ಚಿರ ಋಣಿ ಅವಳ
ಪಾದ ಕಮಲಗಳಿಗೆ.
ನಂತರವೂ ಋಣಿ ಅವಳ ತಾಯಿ ಪ್ರೀತಿಗೆ .......
- ಚುಕ್ಕಿ
09 Apr 2017, 01:30 am
Download App from Playstore: