ಕನ್ನಡ

ಭಾಷೆಯಲಿ ಕನ್ನಡವು
ಅತಿ ಮಧುರ ಹೊನ್ನುಡಿಯು!!
ಬರಹದಲಿ ಕನ್ನಡವು
ಸಿರಿತನದ ಮುನ್ನುಡಿಯು!!

ತೊದಲು ನುಡಿಯಲಿ ಕಲಿತ
ಮೊದಲ ಮಾತದು ಮಧುರ!!
ಸ್ವರದಿ ನುಡಿಯಲು ಪದವ
ದೊರೆತ ವರವದು ಜಿಹ್ವೆ ಅದರ!!

ಕಲೆತು ನುಡಿಯಲು ಬಲ್ಲೆ
ಬರೆದು ಓದುವುದ ಬಲ್ಲೆ!!
ಬೆಲ್ಲದ ಸಿಹಿತನವು ಈ ಭಾಷೆ
ಕೇಳಿ ನುಡಿಯದಿರೆ ಹತಾಶೆ!!

ಹೆಮ್ಮೆಯ ಪದವದು
ಅದ ನುಡಿಯಲು ತವಕ!!
ಕಸ್ತೂರಿ ಕನ್ನಡವೇ
ನಮ್ಮ ಕರುನಾಡ ತಿಲಕ!!

- ಪಿ.ಜಿ.ಜ್ಯೋತಿ

14 Apr 2017, 11:16 am
Download App from Playstore: