ಮನದ ತುಡಿತ....
ಘೋರ ಬಿಸಿಲಿಗೆ ಬಳಲಿತೆ ಮನ..
ಮಳೆಹನಿ ಸುರಿಸಿದರೂ ಗಗನ..
ತಣಿಯಲಿಲ್ಲವೇಕೆ ಬಸವಳಿದ ಮನ....
ಸುತ್ತಿ ಬಂದರೂ ಬನ..
ನೋಡಿ ಬಂದರೂ ವನ..
ಕೇಳಿದರೂ ಕುಹೂ ಕುಹೂ ಗಾನ..
ಹಕ್ಕಿಗಳ ಚಿಲಿಪಿಲಿ ನಾದ..
ಬೇಸರದಿಂದೇಕೊ ಮನ....
ಮಾಡಿದರೂ ಸಿಹಿ ಪಾನ..
ಬಂದರೂ ಎಲ್ಲರ ಸಾಂತ್ವಾನ..
ನೋಡಿಬಂದರೂ ಸಿನಿಮಾನ..
ಉಲ್ಲಾಸವಿಲ್ಲದಂತಾಗಿದೇಕೂ ಮನ....
ಯೋಚಿಸಿದರೂ ತಿಳಿಯದಾಗಿ ಕಾರಣ..
ಮಾಡುತಾ ದೇವರಿಗೆ ನಮನ..
ಕಣ್ ಮುಚ್ಚಿ ಕುಳಿತೆ
ಮಾಡಲು ಧ್ಯಾನ....
ತಾನಾಗೆ ಕೈ....ಹಿಡಿಯಿತು ಪೆನ್ನನ್ನ..
ಹರಿದಂತಾಗಿ ಮನಕೆ ಚೇತನ..
ಉಲ್ಲಾಸ ಸಿಕ್ಕಂತಾಗಿ ಮನ..
ಜೋಡಿಸಿ ಜೋಡಿಸಿ ಪದಗಳನ
ಶುರುಮಾಡಿತು ಬರೆಯಲು ಕವನ....
ಈ ತುಡಿತ ಎಲ್ಲರಿಗೂ ಸಮಾನ..
ವಿಧಿ ಬಚ್ಚಿಟ್ಟರಬಹುದೆನಿಸಿತು
ಎಲ್ಲರಲೂ ಒಂದೊಂದು ಕಲೆಯನ್ನ..
ಉಲ್ಲಾಸವಾಗಿರಿಸಲು ತಮ್ಮಮನವನ್ನ....
ಅದಕೆ ಯೋಚಿಸಿ ಪೋಷಿಸಿ..
ಉಣಿಸಿ ಬೆಳಸಿ..
ನಿಮ್ಮ ನಿಮ್ಮಲ್ಲಿರುವ ಕಲೆಯನ್ನ..
ಆಗ ತಾನಾಗಿಯೇ ಸಂತಸದಿಂದ
ನಗುತ ನಲಿಯುತಲಿರುವುದು
ಎಲ್ಲರ ಮನ....
- KR Sreekamala
20 Apr 2017, 06:55 am
Download App from Playstore: