ಭಕ್ತಿಯ ಮುಗ್ಧತೆ

ನೀ‌ನೆ ನನ್ನ ತಾಯಿ
ಎಂದು ಭಾವಿಸಿದೆ
ನಿ‌ನ್ನ ಪಾದ ಸೇವೆಯ
ಮಾಡಲು ಬಯಸಿದೆ!!

ನಿನ್ನ ಸ್ಮರಣೆಯಲ್ಲೆ
ನಾನು ತನ್ಮಯಳಾದೆ
ಸ್ಥಿರವಾಗಿ ನೀ ಬಂದು
ನೆಲೆಸೆಂದು ಬೇಡಿದೆ!!

ನಿನ್ನ ಮಹಿಮೆಗೆ
ಮರುಳಾದೆ
ನಿನ್ನ ಅಗಲಿಕೆ
ಸಹಿಸದಾದೆ!!

ಎದುರಾದ ಶಕುನಗಳೆಲ್ಲ
ನೀನೆ ಎಂದು ಅರಿತೆ
ಮನದ ತುಡಿತಗಳಿಗೆಲ್ಲ
ನೀನೆ ಉತ್ತರವನಿತ್ತೆ!!

ನಾನೆ ಎಂಬ ಭಾವನೆ
ನನ್ನಿಂದ ಕಿತ್ತೆಸೆದೆ
ಮಹಾತ್ಮರ ಸಾಧನೆ
ಕಣ್ಮುಂದೆ ನೀ ತಂದೆ!!

ನಿನ್ನ ಮಹಿಮೆಯಿಂದ ಹುಟ್ಟಿತು
ನನ್ನಲ್ಲಿ ಜ್ಞಾನ ದಾಹ
ನೀನೆ ತೋರಿದೆ
ಜ್ಞಾನಾರ್ಜನೆಯ ಮಾರ್ಗ!!

ಶಂಕರರಿಗೆ ದೀಕ್ಷೆಯನಿತ್ತೆ
ಶ್ರುಂಗೇರಿಯಲಿ ನಲೆನಿಂತೆ
ನಿನ್ನ ಮಹಿಮೆಯ ಹರಡಿದರು
ಅಂದೆ ಮಹಾನ್ ಶಂಕರರು!!

- ಶಕುಂತಲಾ

20 Apr 2017, 03:37 pm
Download App from Playstore: